ವಿದುರ

Author : ಜಗದೀಶಶರ್ಮಾ ಸಂಪ

Pages 192

₹ 250.00




Year of Publication: 2022
Published by: ಸಾವಣ್ಣ ಎಂಟರ್ ಪ್ರೈಸಸ್
Address: ನಂ.12, ಬೈರಸಂದ್ರ ಮುಖ್ಯ ರಸ್ತೆ, ಜಯನಗರ 1ನೇ ಬ್ಲಾಕ್ ಪೂರ್ವ, ಬೆಂಗಳೂರು -560011
Phone: 9036312786

Synopsys

ಲೇಖಕ ಜಗದೀಶಶರ್ಮಾ ಸಂಪ ಅವರು ವಿದುರನ ಅದ್ಭುತ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿರುವ ಕೃತಿ ಮಹಾಭಾರತದ ನೈಜ ನಾಯಕ ‘ವಿದುರ’. ನೀತಿ, ನಿಯತಿ, ನಿಯತ್ತು ಎಂಬ ಉಪಶೀರ್ಷಿಕೆಯನ್ನಿದು ಹೊಂದಿದೆ. ಕೃತಿಯಲ್ಲಿ ಲೇಖಕರೇ ಹೇಳಿರುವಂತೆ, ವಿದುರನ ಚರಿತ್ರೆಯೇ ಈ ಕೃತಿ. ಅವನ ಕಥೆ, ಅವನು ಹೇಳಿದ ಕಥೆ ಮತ್ತು ಅವನು ಹೇಳಿದ ನೀತಿಗಳನ್ನು ಓದುವ ಸೌಕರ್ಯಕ್ಕಾಗಿ ವಿಭಾಗಿಸಿದೆ. ವಿದುರ ಇರುವ ಘಟ್ಟಗಳನ್ನು ವಿಸ್ತಾರವಾಗಿಯೂ, ಅವನಿಲ್ಲದ ಘಟ್ಟಗಳನ್ನು ಸಂಕ್ಷೇಪವಾಗಿಯೂ ಹೇಳಿದೆ. ಆದ್ಯಂತ ವ್ಯಾಪಿಸಿದ ವಿದುರನ ಕುರಿತು ಹೇಳುವಾಗ ಸಹಜವಾಗಿಯೇ ಸಮಗ್ರ ಮಹಾಭಾರತವೇ ಬಂದಿದೆ. ಪುಣೆಯ ಭಂಡಾರ್ಕರ್ ಓರಿಯಂಟಲ್ ರಿಸರ್ಚ್ ಇನ್ಸ್’ಟಿಟ್ಯೂಟ್, ಸುದೀರ್ಘ ಕಾಲ ಅನೇಕ ವಿದ್ವಾಂಸರ ಪರಿಶ್ರಮದಿಂದ ಕಳೆದ ಶತಮಾನದಲ್ಲಿ ಸಂಪಾದಿಸಿದ, ಮಹಾಭಾರತ ಕ್ರಿಟಿಕಲ್ ಎಡಿಷನ್’ನ ಇಲೆಕ್ಟ್ರಾನಿಕ್ ಟೆಕ್ಸ್ಟ್ ಅನ್ನು ಇಲ್ಲಿ ಆಧಾರವಾಗಿ ಇಟ್ಟುಕೊಳ್ಳಲಾಗಿದೆ. ಇದು ಯಥಾವತ್ ಅನುವಾದವಲ್ಲ, ನಿರ್ದಿಷ್ಟ ಓದುಗರನ್ನು ಗಮನದಲ್ಲಿ ಇಟ್ಟುಕೊಂಡ ಪುನಃಕಥನ. ಹಾಗೆಂದು ವ್ಯಾಸರನ್ನು ಅತಿಕ್ರಮಿಸಿಲ್ಲ. ಅವರ ಭಾವಕ್ಕೆ ಅನುಗುಣವಾಗಿ ಬರೆದಿದೆ ಎಂದಿದ್ದಾರೆ.

About the Author

ಜಗದೀಶಶರ್ಮಾ ಸಂಪ

ಜಗದೀಶ ಶರ್ಮಾ ಸಂಪ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಸಂಪ ಗ್ರಾಮದವರು. ತಂದೆ - ಚಿದಾನಂದ ಭಟ್ಟ, ತಾಯಿ- ಮಂಗಳಗೌರಿ. ಗೋಕರ್ಣದ ಶ್ರೀದಕ್ಷಿಣಾಮೂರ್ತಿ ವೇದಭವನ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಕೃಷ್ಣಯಜುರ್ವೇದ ಕ್ರಮಾಂತ ಅಧ್ಯಯನ ಮಾಡಿದ್ದಾರೆ. ಆನಂತರ, ಮೈಸೂರಿನ ಶ್ರೀಮನ್ಮಹಾರಾಜ ಸಂಸ್ಕೃತ ಮಹಾ ಪಾಠಶಾಲೆಯಲ್ಲಿ ಅಲಂಕಾರಶಾಸ್ತ್ರದಲ್ಲಿ ವಿದ್ವತ್ ಪದವಿ, ಅದ್ವೈತ ವೇದಾಂತ, ನ್ಯಾಯವೈಶೇಷಿಕ, ಸಾಂಖ್ಯಯೋಗ ಧರ್ಮಶಾಸ್ತ್ರಗಳಲ್ಲಿ ವಿಶೇಷ ಅಧ್ಯಯನ ಮಾಡಿದ್ದಾರೆ. ಕರ್ನಾಟಕ ಮುಕ್ತವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ರಾಷ್ಟ್ರಮಟ್ಟದ ಸಂಸ್ಕೃತ ವಾಕ್ಪ್ರತಿಯೋಗಿತಾದಲ್ಲಿ ಎರಡು ಬಾರಿ ಸ್ವರ್ಣಪದಕ ಪಡೆದಿದ್ದಾರೆ. ರಾಷ್ಟ್ರಮಟ್ಟದ ವೇದ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ.  ಸಂಸ್ಕೃತಿ ಪರಿಚಯಿಸುವ, ನೈತಿಕಮೌಲ್ಯಗಳನ್ನು ...

READ MORE

Related Books