ಭಾರತೀಯ ಸ್ಮೃತಿಗಳು

Author : ಕೆ.ಆರ್. ರಂಗಾಚಾರ್ (ರಘುಸುತ)

Pages 417

₹ 80.00




Year of Publication: 2000
Published by: ಹೇಮಂತ ಸಾಹಿತ್ಯ
Address: ೩972, ಸಿ, 4ನೇ ಬ್ಲಾಕ್, ರಾಜಾಜಿನರ, ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ರಸ್ತೆ, ಬೆಂಗಳುರು-560010

Synopsys

ಪ್ರಾಚೀನ ಭಾರತದ ಸ್ಮೃತಿಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಿದ ವಿದ್ವಾನ್ ರಘುಸುತ ಅವರ ಕೃತಿ-ಭಾರತೀಯ ಸ್ಮೃತಿಗಳು. ಈ ಕೃತಿಯು ನೀತಿಪ್ರದ, ಬೋಧಪ್ರದವಾಗಿದೆ. ಸ್ಮೃತಿಗಳು ಮಾನವನ ದಿನನಿತ್ಯದ ಚಟುವಟಿಕೆಗಳ ಮಾರ್ಗದರ್ಶಿಗಳು. ವ್ಯಕ್ತಿಯೊಬ್ಬನ ಸಾಮಾಜಿಕ ಜೀವನಕ್ಕೆ, ಗಂಡು-ಹೆಣ್ಣಿನ ಸಂಬಂಧ, ಶಿಕ್ಷಣ, ನಡಾವಳಿಕೆ, ಹಿರಿ-ಕಿರಿಯರ ಹೊಣೆಗಾರಿಕೆಗಳು, ಕರ್ತವ್ಯ, ವ್ಯಕ್ತಿಗತ ಬದುಕಿನ ಸ್ವಚ್ಛತೆ ಹೀಗೆ ಕ್ರಮಬದ್ಧ ಬದುಕಿಗೆ ಅತ್ಯಾವಶ್ಯಕಗಳು ಎಂದು ಅಂದಿನ ಸಾಮಾಜಿಕ ವ್ಯವಸ್ಥೆ ಕಂಡುಕೊಂಡಿತ್ತು. ಮನುಸ್ಮೃತಿಯ ಕನ್ನಡಾನುವಾದ ಹೊರತುಪಡಿಸಿದರೆ ಇತರೆ ಸ್ಮೃತಿಗಳು ಕನ್ನಡಕ್ಕೆ ಅನುವಾದಗೊಂಡಿರುವುದು ಕಡಿಮೆ. ಆದ್ದರಿಂದ, ಭಾರತೀಯ ಸ್ಮೃತಿಗಳು ಶೀರ್ಷಿಕೆಯಡಿ ಸ್ಮೃತಿಗಳ ಅನುವಾದ ಕಾರ್ಯ ಕೈಗೊಂಡಿರುವುದಾಗಿ ಲೇಖಕರು ಹೇಳಿದ್ದಾರೆ. ಕೃತಿಯಲ್ಲಿ ಹಿಂದೂ ಧರ್ಮದ ಆಧಾರಗಳು, ಧರ್ಮ-ಶಾಸ್ತ್ರ, ಭಾರತೀಯ ಧರ್ಮಸೂತ್ರಗಳು ಈ ಕುರಿತು ಸುರ್ದೀರ್ಘವಾದ ಲೇಖನಗಳು ಒಳಗೊಂಡಂತೆ 36 ಸ್ಮೃತಿಗಳ ವಿವರಣೆ ಇಲ್ಲಿದೆ.

About the Author

ಕೆ.ಆರ್. ರಂಗಾಚಾರ್ (ರಘುಸುತ)
(08 May 1929 - 27 January 2003)

ಭೂಗೋಳ ಶಾಸ್ತ್ರಜ್ಞ ಕೆ.ಆರ್. ರಂಗಾಚಾರ್ ಅವರು ಚಿಕ್ಕಬಳ್ಳಾಪುರದ ಬಳಿಯ ನೊಳಕುಂಟೆ ಹೊಸೂರಿನವರು. (ಜನನ: 08-05-1929). ತಂದೆ ರಘುನಾಥಾಚಾರ್, ತಾಯಿ ಇಂದಿರಮ್ಮ. ಇವರ ಕಾವ್ದನಾಮ ರಘುಸುತ.  ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. ಪದವೀಧರರು. ಟೀಚರ್ಸ್ ಕಾಲೇಜಿನಿಂದ ಬಿ.ಎಡ್‌ ಪದವೀಧರರು. ಮಿರ್ಲೆ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. 100ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಇವರ ಮೊದಲ ಕಾದಂಬರಿ ಆಶಾನಿರಾಶ (1924)  ಪ್ರಕಟಗೊಂಡಿತ್ತು. ಪೊಯ್‌ಸಳ, ಮೀರ್ ಸಾದಿಕ್‌, ಸುಳಿಗಾಳಿ ಸಹ ಕಾದಂಬರಿಗಳು.   ‘ಗಗನ ಕುಸುಮ’ ಎಂಬುದು ವೈಜ್ಞಾನಿಕ ಕಾದಂಬರಿ. ‘ಮೇಸ್ಟ್ರಚೀಲ’ ಎಂಬುದು ನಗೆಕಾದಂಬರಿ. ‘ಪತ್ತೇದಾರ’ ಕಾವ್ಯನಾಮದಲ್ಲಿ ಪತ್ತೆದಾರಿ ಕಾದಂಬರಿಗಳನ್ನು ಬರೆದಿದ್ದಾರೆ. ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ. ಲಾಯರ್ ರಾದ್ಧಾಂತ, ರಿಹರ್ಸಲ್‌ ಗಡಿಬಿಡಿ, ಅಲಾಲ್‌ಟೋಪಿ, ತಿಪ್ಪರಲಾಗ, ಎಡಬಿಡಂಗಿ, ಪ್ರಾಕ್ಟೀಶ್‌ ಪರದಾಟ, ಚೀಟಿಕಾಟ, ಹನಿಮೂನ್‌, ಭಂಡರಬೇಸ್ರು, ...

READ MORE

Related Books