ಬಸವಣ್ಣ ಬೋಧಿಸಿದ ಸಿದ್ಧಾಂತ ಮತ್ತು ತತ್ವಗಳು

Author : ಚನ್ನಪ್ಪ ಎರೇಸೀಮೆ

Pages 58

₹ 1.00




Year of Publication: 1967
Published by: ಶ್ರೀಕಂಠೇಶ್ವರ ಪ್ರೆಸ್ ಮತ್ತು ಬುಕ್ ಡಿಪೋ
Address: ಮಹಾತ್ಮ ಗಾಂಧಿ ರಸ್ತೆ, ತುಮಕೂರು

Synopsys

ಬಸವಣ್ಣ ಭೋದಿಸಿದ ಸಿದ್ಧಾಂತ ಮತ್ತು ತತ್ವಗಳು ಎಂಬ ಪುಸ್ತಕವು ಚನ್ನಪ್ಪ ಎರೇಸೀಮೆ ಅವರ ಕೃತಿಯಾಗಿದೆ. ಈ ಕೃತಿಯಲ್ಲಿ ಬಸವಣ್ಣನವರ ವೈಯಕ್ತಿಕ ಜೀವನಚರಿತ್ರೆಗೆ ಮಹಾಮೂಲ್ಯವುಂಟು. ಆ ಮೂಲ್ಯವನ್ನು ನಾವು ಬೇರೆ ಗ್ರಂಥಗಳಿಂದ ಅಳೆಯುವುದಕ್ಕಿಂತ ಹೆಚ್ಚಾಗಿ ಅವರು ಬಿಟ್ಟು ಹೋದ ಜ್ಯೋತಿಸ್ವರೂಪವಾದ ಅವರ ವಚನ ರಾಶಿಯಿಂದಲೇ ಅಳೆದರೆ ವಿಶೇಷ ಪ್ರಯೋಜನವುಂಟು, ಸಮತೆ, ವಿಶ್ವ ಬಾಂಧವ್ಯ, ವ್ಯಕ್ತಿ ಸ್ವಾತಂತ್ರ, ಸತ್ಯ, ಅಹಿಂಸೆ, ದಯಾಪರತೆ ಮೊದಲಾದ ಶ್ರೇಷ್ಠ ತತ್ತ್ವಗಳ ತಳಹದಿಯ ಮೇಲೆ ಆದರ್ಶ ಸಮಾಜವೊಂದನ್ನು ರೂಪಿಸುವ ಯುಗಪ್ರವರ್ತಕರಲ್ಲಿರುವ ಎಲ್ಲ ಗುಣಗಳನ್ನೂ ಇವರಲ್ಲಿ ಕಾಣಬಹುದು. ಅವರು ತತ್ತ್ವಜ್ಞಾನ, ದಿವ್ಯಾನುಭವ, ಆಚಾರ- ವಿಚಾರ ವಿಷಯದಲ್ಲಿ ನೀತಿಬೋಧೆಗಳನ್ನು ತಾವು ಕಂಡುಂಡು ಜನತೆಗೆ ಬೋಧಿಸಿದ್ದಾರೆ. ಅವರು ಬೋಧಿಸಿದ ಬೋಧೆಗಳು ಮಾನವ ಸಾಮಾನ್ಯವಾದುವು. ಅವರ ಸಿದ್ಧಾಂತದಲ್ಲಿ ನೂತನ ದೃಷ್ಟಿಯಿದೆ. ಹಳೆಯದೆಲ್ಲ ಸತ್ಯವೆಂಬ ಕುರುಡು ದೃಷ್ಟಿ ಅವರದಲ್ಲ. ಅನುಭವಕ್ಕೆ ನಿಲುಕದ, ಮಾನವಸಾಮಾನ್ಯವಲ್ಲದುದು ಅವರಿಗೆ ಬೇಕಿಲ್ಲ. ಇಂತಹ ವಿಚಾರಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.

About the Author

ಚನ್ನಪ್ಪ ಎರೇಸೀಮೆ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರವಿ ಗ್ರಾಮದ ಚೆನ್ನಪ್ಪ ಎರೇಸೀಮೆ ಅವರು (1919) ಜನಿಸಿದರು. ಮುಲ್ಕಿ ಪರೀಕ್ಷೆ ಪಾಸಾದ ನಂತರ ಶಿಕ್ಷಕರಾದರು. ಕೀರ್ತನಾಕಾರ-ಪ್ರವಚನಾಕಾರರಾದರು. ನುಡಿ ಗಾರುಡಿಗ ಎಂದೇ ಪ್ರಖ್ಯಾತರು. ಶಿಕ್ಷಕ ತರಬೇತಿ ಕಾಲೇಜಿನಲ್ಲಿ 30 ವರ್ಷ ಕಾಲ ಬೋಧನೆ ನಂತರ ನಿವೃತ್ತರಾದರು. ತುಮಕೂರಿನ ಸಿದ್ಧಗಂಗಾ ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಠದ ಸಿದ್ಧಗಂಗಾ ಮಾಸಪತ್ರಿಕೆಯ ಸಂಪಾದಕರೂ ಆಗಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿಯವರ ಪಟ್ಟಾಧಿಕಾರ ಮಹೋತ್ಸವ ವೇಳೆ ‘ಸಿದ್ಧಗಂಗಾ ಶ್ರೀ’ ಹಾಗೂ ವಜ್ರಮಹೋತ್ಸವ ವೇಳೆ ‘ದಾಸೋಹ ಸಿರಿ’ ಮಹಾಸಂಪುಟಗಳ ರಚನೆ-ಪ್ರಕಟಣೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು. ಪ್ರಾಥಮಿಕ, ಪ್ರೌಢಶಿಕ್ಷಣ, ಪಿಯುಸಿ ...

READ MORE

Related Books