ಕೌಶಿಕ ರಾಮಾಯಣ

Author : ಬಿ.ಎಚ್. ಶ್ರೀಧರ

Pages 100

₹ 1.00




Year of Publication: 1972
Published by: ಐಬಿಎಚ್ ಪ್ರಕಾಶನ
Address: #77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ ಕೆ ಮೂರನೇ ಸ್ವೇಜ್, ಬೆಂಗಳೂರು- 560085.
Phone: 080 - 48371555

Synopsys

‘ಕೌಶಿಕ ರಾಮಾಯಣ’ ಕೃತಿಯು ಬಿ.ಎಚ್. ಶ್ರೀಧರ ಅವರ ರಾಮಾಯಣ ವಿಚಾರಗಳನ್ನೊಳಗೊಂಡ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಸದ್ಗುರುವನ್ನು ಬ್ರಹ್ಮಸ್ವರೂಪನೆಂದು ನಂಬಿದ ಭಾರತದ ಅಂಗವಾದ ಕನ್ನಡ ನಾಡಿನ ಉತ್ತರ ಕನ್ನಡ ಜಿಲ್ಲೆಯ ಕುಮಟೆ-ಶಿರಸಿ ತಾಲೂಕುಗಳ ಗಡಿಗಳು ಸಂಧಿಸುವಲ್ಲಿರುವ ಯಾಣದ ವರಕವಿ ಬತ್ತಲೇಶ್ವರ ತನಗೆ ಹೆಚ್ಚುಕಡಿಮೆ ಸಮಕಾಲೀನನಾಗಿದ್ದ ಕುಮಾರವ್ಯಾಸನು “ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ ತಿಂತಿನಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ” ಎಂದು ಹೇಳಲು ಕಾರಣನಾದದ್ದು "ಕೌಶಿಕ ರಾಮಾಯಣ”ವನ್ನು ಬರೆದುದರಿಂದ. ಇದು ಭಾಮಿನೀ ಷಟ್ಪದಿಯಲ್ಲಿ “ಲಲಿತವಹ ಕನ್ನಡದ ನುಡಿಯಲಿ” ಬರೆಯಲಾದ 44 ಸಂಧಿಗಳನ್ನುಳ್ಳ ಮಹಾಕಾವ್ಯ. ಯುದ್ಧ ಕಾಲದಲ್ಲಿ ಬಾಣ ಬಿಡುವಾಗ ರಾಮ ಅನೇಕ ಸಲ ಗುರು ಕೌಶಿಕನನ್ನು ಇಲ್ಲಿ ನೆನೆದುಕೊಳ್ಳುತ್ತಾನೆ. ಅವನ ಜಯದ ಮೂಲ ಕೌಶಿಕ ಕೃಪೆ. ಆದುದರಿಂದ ಇದು ಕೇವಲ ರಾಮಾಯಣವಲ್ಲ, ಕೌಶಿಕ ರಾಮಾಯಣ! ಎನ್ನುತ್ತದೆ ಈ ಕೃತಿ.

About the Author

ಬಿ.ಎಚ್. ಶ್ರೀಧರ
(24 April 1918 - 24 April 1990)

ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್‌ಗೆ ಸೇರಿದ್ದು ಮೈಸೂರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್‌ಶಿಪ್, ಇಂಟರ್ ಮೀಡಿಯೆಟ್ ಮುಗಿಸಿದರು. ದೊರೆತ ಶಿಷ್ಯ ವೇತನ, ಮನೆ ಪಾಠ ಹೇಳಿ ತಂದೆಗೂ ಹಣ ಸಹಾಯ. ಬಿ.ಎ. ಆನರ್ಸ್‌ ಪಾಸು. ಹಲವಾರು ಪದಕ ಬಹುಮಾನ ಗಳಿಕೆ ಸಂತಸ. ಆದರೆ ಎಂ.ಎ. ಓದಲು ಹಣದ ಅಡಚಣೆಯಿಂದ ಬೆಂಗಳೂರಿನ ಪ್ರೆಸ್ ...

READ MORE

Related Books