
ಹಿರಿಯ ವಿದ್ವಾಂಸ ಎನ್. ರಂಗನಾಥಶರ್ಮಾ ಅವರ ‘ವ್ಯಾಸ ರಹಸ್ಯ’ ಕೃತಿಯು ವ್ಯಾಸ ಮಹರ್ಷಿಗಳ ಕುರಿತ ಶ್ಲೋಕಗಳ ಬರವಣಿಗೆಯಾಗಿದೆ. ಕವಿಯ ಬುದ್ಧಿಕೌಶಲವನ್ನೂ ಶ್ಲೋಕರಚನಾ ಸಾಮರ್ಥ್ಯವನ್ನು ಪ್ರತಿಬಿಂಬಿಸತಕ್ಕವು. ಇನ್ನು ಪ್ರಹೇಲಿಕಾ, ಸಮಸ್ಯಾಪೂರಣ, ಅಂತರಾಲಾಪ ಬಹಿರಾಲಾಪ, ಅಕ್ಷರಚ್ಯುತಕ, ಮಾತ್ರಾಚ್ಯುತಕ, ಬಿಂದುಮತೀ ಮೊದಲಾದ ಚಮತ್ಕಾರ ವಿಶೇಷಗಳು ಒಂದು ಬಗೆಯ ಕ್ರೀಡೆಗಳು, ಚದುರಂಗ, ಪಗಡೆಯಾಟ - ಮೊದಲಾದವುಗಳಂತೆ ಶಬ್ದಸಂಪತ್ತುಗಳಿಂದಾಡುವ ಆಟಗಳು ಇಲ್ಲಿವೆ. ಈ ವ್ಯಾಸರಹಸ್ಯದಲ್ಲಿ ಬರೆದವುಗಳನ್ನು ಕೂಟಪದ್ಯಗಳೆನ್ನಬಹುದು. ಅಪ್ರಸಿದ್ಧಪದ, ಶ್ಲೇಷ, ವ್ಯಾಕರಣಬಲದಿಂದ ಹೊಸದಾಗಿ ಕಲ್ಪಿಸಿದ ಪದ -ಇತ್ಯಾದಿ ಬಳಕೆಯಿಂದ ಶ್ರೋತೃವಿಗೆ ಅರ್ಥಮಾಡಿಕೊಳ್ಳಲು ತುಂಬ ಕ್ಲೇಶವನ್ನು ಕೊಡುವ ಪದ್ಯಗಳಾಗಿವೆ.
©2025 Book Brahma Private Limited.