ಗಾಯತ್ರೀಪುರಶ್ಚರಣವಿಧಿಃ

Author : ಕೆ.ಜಿ. ಗಣೇಶ ಭಟ್ಟ , ಶೃಂಗೇರಿ

Pages 63

₹ 80.00




Year of Publication: 2022
Published by: ನಚಿಕೇತ ಪ್ರಕಾಶನ
Address: ಶಾಂತಿ ನಿಲಯ, ರಾಜಾನಗರ, ಶೃಂಗೇರಿ-577139, ಚಿಕ್ಕಮಗಳೂರು ಜಿಲ್ಲೆ
Phone: 6360157397

Synopsys

ಗಾಯತ್ರೀಪುರಶ್ಚರಣವಿಧಿಃ ಗ್ರಂಥದಲ್ಲಿ ಗಾಯತ್ರೀ ಮಂತ್ರದ ಮಹಿಮೆ, ಉಪಾಸನೆ ಮತ್ತು ಪುರಶ್ಚರಣೆಗೆ ಸಂಬಂಧಿಸಿದ ಅನೇಕ ವಿಷಯಗಳು ಸಂಸ್ಕೃತ ವಾಙ್ಮಯದಲ್ಲಿ ವಿಸ್ತಾರವಾಗಿ ವರ್ಣಿಸಲ್ಪಟ್ಟಿವೆ. ಸಾರಭೂತವಾಗಿ, ಮಾನವನನ್ನು ಪ್ರಜ್ಞಾಶಕ್ತಿಯ ಪರಾಕಾಷ್ಠೆಗೆ ತಲುಪಿಸುವ ಸಾಧನವೇ ಗಾಯತ್ರೀ ಉಪಾಸನೆ. ಪ್ರಕೃತಗ್ರಂಥದಲ್ಲಿ ಗಾಯತ್ರೀಮಂತ್ರದ ಪುರಶ್ಚರಣವಿಧಿಯನ್ನು ಹಲವು ಗ್ರಂಥಗಳಿಂದ, ಆಪ್ತವಿದ್ವಾಂಸರ ಸಲಹೆ-ಸಹಕಾರದೊಂದಿಗೆ ಸಂಗ್ರಹಿಸಲಾಗಿದೆ. ಇಂತಹ ಪ್ರಯತ್ನ ಕನ್ನಡದ ಮಟ್ಟಿಗೆ ಇದೇ ಮೊದಲೆಂಬುದು ಪ್ರಕಾಶಕರ ಅಭಿಪ್ರಾಯವಾಗಿದೆ. 

About the Author

ಕೆ.ಜಿ. ಗಣೇಶ ಭಟ್ಟ , ಶೃಂಗೇರಿ

ಶ್ರೀ ಕೆ. ಜಿ. ಗಣೇಶ ಭಟ್ಟರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕುಡಿನಲ್ಲಿ ಗ್ರಾಮದವರು. ಕಳೆದ ಮೂರುದಶಕಗಳಿಂದ ಶೃಂಗೇರಿಯಲ್ಲಿ ವಾಸಿಸುತ್ತಿದ್ದಾರೆ. ಶೃಂಗೇರಿಯ ಶ್ರೀಮಠೀಯ ಸದ್ವಿದ್ಯಾ ಸಂಜೀವಿನೀ ಸಂಸ್ಕೃತ ಮಹಾಪಾಠಶಾಲೆಯ ಪ್ರಾಕ್ತನ ವಿದ್ಯಾರ್ಥಿಯಾಗಿದ್ದು, ವೇದ, ಆಗಮ ಮತ್ತು ಸಾಹಿತ್ಯವನ್ನು ಅಭ್ಯಸಿಸಿದ್ದಾರೆ. ಪೌರೋಹಿತ್ಯ ವೃತ್ತಿಯಲ್ಲಿ ಎರಡು ದಶಕಗಳಿಗೂ ಮಿಗಿಲಾದ ಅನುಭವದ ಜೊತೆಗೆ, ನಾಲ್ಕು ಧಾರ್ಮಿಕ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಕೃತಿಗಳು: ನಿತ್ಯಕರ್ಮ ಪ್ರಕಾಶಿಕಾ (ಋಗ್ವೇದೀಯಾ), ಪರ್ಜನ್ಯ ಕಲ್ಪಃ, ಪ್ರಯೋಗ ಪ್ರಕಾಶಿಕಾ (ಋಗ್ವೇದೀಯಾ), ಸಂಧ್ಯಾವಂದನಮ್‌ ಶಿವಾದಿಪಂಚಾಯತನಪೂಜಾ (ಋಗ್ವೇದೀಯಾ) ...

READ MORE

Related Books