ಅಷ್ಟದಶಾ ಪೀಠಗಳು ಹಾಗೂ ಪ್ರಸಿದ್ಧ ದೇವಿ ಕ್ಷೇತ್ರಗಳು

Author : ಲಲಿತಾ ಶೇಷಾದ್ರಿ

Pages 205

₹ 300.00




Year of Publication: 2022
Published by: ಲಲಿತಾ ಶೇಷಾದ್ರಿ
Address: #60/29,ಲಕ್ಷ್ಮಿ ನಿವಾಸ, 1ನೇ ಮುಖ್ಯರಸ್ತೆ,ಲೊಯರ್‌ ಪ್ಯಾಲೆಸ್‌ ಆರ್ಚಡ್‌, ಬೆಂಗಳೂರು- 560 003
Phone: 9739454622

Synopsys

`ಅಷ್ಡದಶಾ ಪೀಠಗಳು ಹಾಗೂ ಪ್ರಸಿದ್ಧ ದೇವಿ ಕ್ಷೇತ್ರಗಳು' ಲಲಿತಾ ಶೇಷಾದ್ರಿ ಅವರ ಕೃತಿಗಳಾಗಿವೆ. ಕೇರಳ ರಾಜ್ಯದ ಪೂರ್ಣಾನದಿ ತೀರದಲ್ಲಿ ಇರುವ ಅತಿ ಶ್ರೇಷ್ಠವಾದ ಕ್ಷೇತ್ರ ಕಾಲಟಿಯಲ್ಲಿ ಶ್ರೀ ಶಂಕರ ಭಗವತ್ಪಾದಾಚಾರ್ಯರು ಜನಿಸಿ ಆ ಕ್ಷೇತ್ರವನ್ನು ಪವಿತ್ರಗೊಳಿಸಿದರು. ತಮ್ಮ ಎಂಟನೇ ವಯಸ್ಸಿನಲ್ಲಿ ತಾಯಿಯ ಸಮ್ಮತವನ್ನು ಪಡೆದು ಸಂನ್ಯಾಸಾಶ್ರಮವನ್ನು ಸ್ವೀಕರಿಸಿದರು. ಆದರೆ ತಮ್ಮ ಜನ್ಮದಾತೆಯ ಅಂತಿಮ ಸಂಸ್ಕಾರಗಳನ್ನು ಮಾಡಲು ಅವರಿಗೆ ಗ್ರಾಮನಿವಾಸಿಗಳು ಸಹಕರಿಸಲಿಲ್ಲ. ಈ ಕಾರಣದಿಂದಾಗಿ ಕಾಲಟಿಗ್ರಾಮ ಶಾಪಗ್ರಸ್ತವಾಯಿತು. ಶ್ರೀ ಶಂಕರರು ಏಕಾಂಗಿಯಾಗಿ ತಮ್ಮ ತಾಯಿಯ ಅಂತ್ಯ ಸಂಸ್ಕಾರವನ್ನು ಅವರಿಗೆ ಸದ್ಧತಿಯನ್ನು ಅನುಗ್ರಹಿಸಿದರು. ಸುರೇಶ್ವರಾಚಾರ್ಯರಿಂದ ಅವಿಚ್ಛಿನ್ನ ಪರಂಪರೆಯನ್ನು ಹೊಂದಿದ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠದ ಆಚಾರ್ಯರುಗಳು ತಪಸ್ವಿಗಳಾಗಿಯೂ, ಯೋಗಿಗಳಾಗಿಯೂ ಇದ್ದಾರೆ. ಈ ಪೀಠದ ಮೂವತ್ತೆರಡನೆ ಪೀಠಾಧಿಪತಿಗಳಾದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಮಹಾಸ್ವಾಮಿಗಳು ತಪಶಕ್ತಿಯನ್ನೂ, ಜ್ಞಾನವನ್ನೂ ಪಡೆದವರಾಗಿದ್ದರು. ಭಗವತ್ಪ್ರೇರಣೆಯಿಂದ ಇವರು ಕಣ್ಣಿಗೆ ಮರೆಯಾಗಿದ್ದ ಶ್ರೀ ಶಂಕರ ಜನ್ಮಭೂಮಿಯಾದ ಕಾಲಟಿಯನ್ನು ಕಂಡು ಹಿಡಿಯಲು ನಿರ್ಧರಿಸಿದರು ಹೀಗೆ ಅನೇಕ ವಿಚಾರಗಳನ್ನು ಈ ಕೃತಿ ಒಳಗೊಂಡಿದೆ.

About the Author

ಲಲಿತಾ ಶೇಷಾದ್ರಿ

ಲಲಿತಾ ಶೇಷಾದ್ರಿ ಅವರು ಬೆಂಗಳೂರು ಉತ್ತರ ಲಯನ್ಸ್ ಕ್ಲಬ್‌ನ ಸ್ಥಾಪಕ ಅಧ್ಯಕ್ಷರಾಗಿದ್ದು ಈ ಸಂಸ್ಥೆಯ ಮೂಲಕ ಹಲವಾರು ದಶಕಗಳಿಂದ ಸಮಾಜಸೇವೆಯನ್ನು ಮಾಡಿದ್ದಾರೆ. ಅವರು ಸ್ವತಃ ಲೇಖಕಿಯಾಗಿದ್ದು ಹಲವಾರು ಧಾರ್ಮಿಕ ಗ್ರಂಥಗಳನ್ನು  ಪ್ರಕಟಿಸಿರುತ್ತಾರೆ. ಹಾಗೆಯೇ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಅವರು ಕಳೆದ 25 ವರ್ಷಗಳಿಂದ 'ಸೌಹಾರ್ದ ಕುಟುಂಬ ಸಲಹಾ ಕೇಂದ್ರದ ಸ್ಥಾಪಿತ ಅಧ್ಯಕ್ಷೆಯಾಗಿ ಮಹಿಳೆಯರ ಕೌಟುಂಬಿಕ ಸಮಸ್ಯೆಯನ್ನು ಪರಿಹರಿಸಿರುತ್ತಾರೆ. ಹಲವಾರು ವರ್ಷಗಳಿಂದ ಅಂಗ ಕಾರುಣ್ಯ ಕೇಂದ್ರದ ಸದಸ್ಯೆಯಾಗಿ ಸುಮಾರು 10 ಸಾವಿರ ಜನಕ್ಕೆ ಕೃತಕ ಕಾಲು ಜೋಡಣೆಯಲ್ಲಿ ಸಹಾಯ ಮಾಡಿದ್ದಾರೆ. ಕೃತಿಗಳು: ಅಷ್ಡದಶಾ ಪೀಠಗಳು ...

READ MORE

Related Books