ಶ್ರೀ ಮಹಾಭಾರತ ಸಂಪುಟ-4

Author : ಜಿ.ಎನ್. ರಂಗನಾಥ ರಾವ್

Pages 336

₹ 300.00




Year of Publication: 2019
Published by: ವಸಂತ ಪ್ರಕಾಶನ
Address: #360, 10ನೇ ಬಿ ಮುಖ್ಯರಸ್ತೆ, 3ನೇ ಬ್ಲಾಕ್‌, ಜಯನಗರ, ಬೆಂಗಳೂರು-560011
Phone: 08022443996

Synopsys

ಮಹಾಕಾವ್ಯ ಮಹಾಭಾರತವನ್ನು ಪ್ರೊ.ಎಸ್.ಎಲ್. ಶೇಷಗಿರಿ ರಾವ್ ಅವರು ಇಂಗ್ಲಿಷಿನಲ್ಲಿ ಬರೆದಿದ್ದರು. ಇದನ್ನು ಕನ್ನಡಕ್ಕೆ ಜಿ.ಎನ್. ರಂಗನಾಥ ರಾವ್‌ ಅನುವಾದಿಸಿದ್ದಾರೆ. ನಾಲ್ಕು ಸಂಪುಟಗಳ ಈ ಮಹಾಕಾವ್ಯದ ನಾಲ್ಕನೇ ಸಂಪುಟ ಇದಾಗಿದ್ದು, ಇದರಲ್ಲಿ ಶಾಂತಿ, ಅನುಶಾಸನ, ಆಶ್ವಮೇಧಿಕ, ಆಶ್ರಮವಾಸಿ, ಮೌಸಲ, ಮಹಾಪ್ರಸ್ಥಾನಿಕ ಹಾಗೂ ಸ್ವರ್ಗಾರೋಹಣ ಪರ್ವಗಳ ಕುರಿತು ಬರೆದಿದ್ದಾರೆ.  ರಾಗ- ದ್ವೇಷಗಳು, ಛಲ ದ್ವೇಷಗಳು ಬದುಕನ್ನು ನೇಯುವ ಕುರಿತಂತೆ ಕೋಲಾಹಲದ , ಏಳು ಬೀಳುಗಳ, ಚಂಡಮಾರುತದ ಬದುಕಿನ ಬಗ್ಗೆ ಇಲ್ಲಿ ಸವಿಸ್ತಾರವಾಗಿ ಕತೆಯನ್ನು ಕಟ್ಟಿಕೊಡಲಾಗಿದೆ. ಶಾಂತಿ ಪರ್ವದಲ್ಲಿ ಇಂದ್ರ ಮತ್ತು ಬ್ರಾ‌ಹ್ಮಣ ಯುವಕರ, ಶಂಖ ಮತ್ತು ಲಿಖಿತರ, ನರಿ ಹಾಗೂ ಹುಲಿಯ, ಸನ್ಯಾಸಿ ಮತ್ತು ನಾಯಿ, ಪ್ರಹ್ಲಾದ ಹಾಗೂ ಇಂದ್ರ, ಕಾಯವ್ಯನ, ಮೂರು ಮೀನುಗಳ, ಪಲಿತ ಮತ್ತು ಲೋಮಶರ, ಬ್ರಹ್ಮದತ್ತ ಮತ್ತು ಪೂಜನಿಯರ, ವಿಶ್ವಾಮಿತ್ರ ಮತ್ತು ಬೇಟೆಗಾರನ, ಹಕ್ಕಿಪಿಕ್ಕಿಯವನ, ಸತ್ತ ಬಾಲಕ, ಅವನ ಬಂಧುಗಳು, ನರಿ ಮತ್ತು ಹದ್ದುಗಳ, ಶಾಲ್ಮಲಿ ವೃಕ್ಷ ಮತ್ತು ಪವನ ದೇವನ, ಗೌತಮ ಮತ್ತು ರಾಜಧರ್ಮ, ಸೇನಜಿತ್‌ ಮತ್ತು ಬ್ರಾಹ್ಮಣ ಮುಂತಾದ ಕತೆಗಳನ್ನು ವಿವರಿಸಿದ್ದಾರೆ.

About the Author

ಜಿ.ಎನ್. ರಂಗನಾಥ ರಾವ್
(12 January 1942 - 09 October 2023)

ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ.   ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು  ಪ್ರಕಾರಗಳಲ್ಲಿ ...

READ MORE

Awards & Recognitions

Related Books