ಭಾರತೀಯ ಹಬ್ಬಗಳು

Author : ಸತ್ಯವತಿ ರಾಮನಾಥ

Pages 104

₹ 100.00




Year of Publication: 2014
Published by: ತುಲನ ಪ್ರಕಾಶನ
Address: 7, 1ನೇ ಶಾಪ್ ಲೇನ್, ಟಾಟಾ ಸಿಲ್ಕ್ ಫಾರಂ, ಬಸವನಗುಡಿ, ಬೆಂಗಳೂರು 560004
Phone: 9480184985

Synopsys

‘ಭಾರತೀಯ ಹಬ್ಬಗಳು ’ ಕೃತಿಯು ಸತ್ಯವತಿ ರಾಮನಾಥ ಅವರ ಲೇಖನಸಂಕಲನವಾಗಿದೆ. ಕೃತಿಯು ಸನಾತನ ವಿಚಾರವನ್ನು ತಿಳಿಸುತ್ತದೆ. ಸನಾತನವಾಗಿ ಬಂದಂತಹ ಹಿಂದೂ ಧರ್ಮದಲ್ಲಿ ಸಂಸ್ಕೃತಿಯನ್ನು ಬಿತ್ತರಿಸುವ, ಸುಖ, ಸಂತೋಷ ಜೀವನವನ್ನು ನಮ್ಮದಾಗಿಸಿಕೊಳ್ಳಬಹುದಾದ ಅನೇಕ ಅರ್ಥಪೂರ್ಣ ಸುವಿಚಾರಗಳಿಂದ ಕೂಡಿರುವ ಹಬ್ಬಗಳು ಇದೆ. ಆದರೂ ಅದರ ಅಂತರಾರ್ಥದ ಅರಿವಿಲ್ಲದೆ, 'ಅಯ್ಯೋ ಇವೆಲ್ಲ ಕೆಲಸಕ್ಕೆ ಬಾರದ ಹಬ್ಬಗಳು, ಯಾಕೆ ಇದನ್ನೆಲ್ಲಾ ಆಚರಿಸಬೇಕು, ಮೂಢನಂಬಿಕೆ' ಎಂದು ಮೂಗು ಮುರಿಯುವವರಿಗೆ ಈ ಕೃತಿ ಮಾರ್ಗದರ್ಶನ ಮಾಡಬಲ್ಲದು. ಸತ್ಯವತಿಯವರು ಸಂಸ್ಕೃತ ವಿದ್ವಾಂಸರು, ಹಿಂದೂ ಧರ್ಮದ ಆಳವನ್ನು ತಿಳಿದವರು. ನಾವು ಹಬ್ಬಗಳನ್ನು ಏಕೆ ಆಚರಿಸುವುದು, ಅದರಲ್ಲಿ ಸಿಗುವ ಸುಖ-ಸಂತೋಷ, ನೆಮ್ಮದಿ, ಆನಂದ ಮಾತ್ರವಲ್ಲ, ಇದು ಇಹಪರಗಳೆರಡರ ಸಾಧನೆಗೆ ಒಳಿತೆಂಬುದನ್ನು ಗ್ರಹಿಸಿ ಪ್ರಾಯಶಃ ಈ 'ಭಾರತೀಯ ಹಬ್ಬಗಳು' ಕೃತಿಯನ್ನು ರಚಿಸಿದ್ದಾರೆ ಎಂದು ಅನಿಸುತ್ತದೆ. ಯುಗಾದಿ, ಬಲಿಪಾಡ್ಯಮಿ, ಗೌರಿ ಗಣೇಶ, ನವರಾತ್ರಿ ಎಂದು ಎಲ್ಲ ಹಬ್ಬಗಳ ವಿವರವನ್ನೂ ವಿಷದವಾಗಿ ತಿಳಿಸಿರುವುದಲ್ಲದೆ ಬೇವು, ತುಲಸಿ, ಬಿಲ್ವಪತ್ರೆ, ವೀಳೆದೆಲೆ, ದರ್ಭೆಹುಲ್ಲು, ಶಮೀಪತ್ರೆಗಳ ವಿವರ, ಅರಿಶಿನ, ಕರ್ಪೂರ, ಮಂತ್ರಾಕ್ಷತೆಗಳ ಬಳಕೆಯನ್ನೂ ತಿಳಿಸಿರುತ್ತಾರೆ. ಇಷ್ಟು ಮಾತ್ರವಲ್ಲ ಮಕ್ಕಳಿಗೆ ಕಲಿಯಲು ಯೋಗ್ಯವಾದ ವಾರದ ದಿನಗಳು, ಋತುಗಳು, ನಕ್ಷತ್ರಗಳು, ಷೋಡಶ ಸಂಸ್ಕಾರಗಳು ಎಂದು ಬಹು ಮುಖ್ಯವಾದ ವಿಚಾರಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.

About the Author

ಸತ್ಯವತಿ ರಾಮನಾಥ

ಲೇಖಕಿ ಸತ್ಯವತಿ ರಾಮನಾಥ ಅವರು 1951ರಲ್ಲಿ, ಹಾಸನ ಜಿಲ್ಲೆಯ ಮರಿತಮ್ಮನ ಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ ಸೂರ್ಯನಾರಾಯಣಪ್ಪ ಮತ್ತು ತಾಯಿ ಅನಂತಲಕ್ಷ್ಮಿ. 1970ರಲ್ಲಿ ಬೆಂಗಳೂರು ವಿಶ್ವ ವಿದ್ಯಾನಿಲಯ ದಿಂದ ಬಿ.ಎಸ್ಸಿ.ಪದವಿಯನ್ನೂ, 1974ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪ್ರಥಮ ಶ್ರೇಣಿಯಲ್ಲಿ ಸಂಸ್ಕೃತ ಭಾಷೆಯ ಎಂ.ಎ. ಪದವಿಯನ್ನೂ ಗಳಿಸಿದರು. ಅವರು ಸಂಸ್ಕೃತ ಅಧ್ಯಾಪಕರಾಗಿ ಅನೇಕ ಮಹಾವಿದ್ಯಾಲಯಗಳಲ್ಲಿ ಮೂವತ್ತು ವರ್ಷಕ್ಕೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದಾರೆ. ಮೂರುದಶಕಗಳಿಂದಲೂ ಗಮಕ ಕಾವ್ಯವಾಚನಗಳಿಗೆ ವ್ಯಾಖ್ಯಾನ ನೀಡುವುದರ ಮೂಲಕ ಕನ್ನಡದ ವರಕವಿಗಳಾದ ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ, ನರಹರಿ, ಕುವೆಂಪು ಮೊದಲಾದವರನ್ನು ಕೇಳುಗರಿಗೆ ಪರಿಚಯಿಸಿದ್ದಾರೆ. ಇವರ ಸಾವಿರಾರು ವ್ಯಾಖ್ಯಾನ ...

READ MORE

Related Books