
ಖ್ಯಾತ ಲೇಖಕ ಸುರೇಶ ದ್ವಾದಶೀವಾರ ಅವರು ಮರಾಠಿಯಲ್ಲಿ ಬರೆದ ಕೃತಿಯನ್ನು ಲೇಖಕ ಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಗಾಂಧೀಜಿ ಮತ್ತು ಅವರ ಟೀಕಾಕಾರರು. ಗಾಂಧೀಜಿ ಮತ್ತು ಅವರ ನಿಗೂಢತೆ, ಗಾಂಧೀಜಿ, ಗೋಖಲೆ, ತಿಲಕರು, ಗಾಂಧೀಜಿ ಮತ್ತು ಸಶಸ್ತ್ರಕಾರರು, ಗಾಂಧೀಜಿ ಮತ್ತು ವಿನ್ ಸ್ಟನ್ ಚರ್ಚಿಲ್, ಗಾಂಧೀಜಿ ಮತ್ತು ಕಸ್ತೂರ ಬಾ, ಗಾಂಧೀಝಿ ಮತ್ತು ಧರ್ಮ ಹೀಗೆ ಮಹತ್ವದ ಹಾಗೂ ಚಿಂತನಾಪೂರ್ಣವಾದ ಒಟ್ಟು 18 ಲೇಖನಗಳನ್ನು ಈ ಕೃತಿ ಒಳಗೊಂಡಿದೆ. ಇದರೊಂದಿಗೆ, ಗಾಂಧೀಜಿ ಅವರ ವ್ಯಕ್ತಿತ್ವ ಹಾಗೂ ಚಿಂತನೆಗಳನ್ನುಟೀಕಿಸುತ್ತಿದ್ದ ಹತ್ತು ಹಲವಾರು ಗಣ್ಯರ ಅಭಿಪ್ರಾಯಗಳನ್ನು, ಕಾರಣಗಳನ್ನು ಇಲ್ಲಿ ಸಂಗ್ರಹಿಸಿ ನೀಡಿದ್ದು ಈ ಕೃತಿಯ ಹೆಚ್ಚುಗಾರಿಕೆ.
©2025 Book Brahma Private Limited.