
ಆಹಾರವು ಕೇವಲ ಹೊಟ್ಟು ತುಂಬಿಸುವ ವಸ್ತುವಲ್ಲ. ಅದು, ಆತ್ಮ-ಬುದ್ದಿ-ಮನಸ್ಸು-ದೇಹ ಎಲ್ಲವನ್ನೂ ನಿರ್ಮಿಸಿ, ಬೆಳೆಸಿ, ರಕ್ಷಿಸುತ್ತದೆ. ದಾನವೀಯತೆಯಿಂದ ಮಾನವೀಯತೆಗೆ, ಮಾನವೀಯತೆಯಿಂದ ದೈವೀಕತೆಯೆಡೆಗೆ ಮನುಷ್ಯನನ್ನು ಕರೆದೊಯ್ಯುತ್ತದೆ ಎಂಬುದು ಭಾರತೀಯ ಪರಂಪರೆ ನಂಬಿಕೊಂಡು ಬಂದಿದೆ. ಆದರೆ, ಮಾಂಸಹಾರವೇ ಶ್ರೇಷ್ಠ ಎಂಬ ಭಾವನೆ ಬಲವಾಗಿ ಬೇರೂರಿರುವ ಇಂದಿನ ದಿನಮಾನದಲ್ಲಿ ಸಸ್ಯಾಹಾರದ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ. ಗೋಮಾಂಸ ಭಕ್ಷಣೆಯ ತಡೆ ಇಂದು ಕೋಮುವಾದ ಆಧರಿತ ಘರ್ಷಣೆಗೆ ಕಾರಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ, ದೇಶದ ರಾಜಕೀಯ ವಿಶ್ಲೇಷಕ ಹಾಗೂ ಅಂಕಣ ಬರೆಹಗಾರ ಮುಜಫರ್ ಹುಸೇನ್ ಅವರ ”ಇಸ್ಲಾಂ ಮತ್ತು ಸಸ್ಯಾಹಾರ’ ಕೃತಿಯು ಹೊಸ ಹೊಳವುಗಳನ್ನು ನೀಡುತ್ತದೆ. ಈ ಕೃತಿಯನ್ನು ಶಾರದಾ ಘಾಟೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2025 Book Brahma Private Limited.