
ʻಕಗ್ಗತ್ತಲ ಕಾಲʼ ಕೃತಿಯು ಲೇಖಕ ಶಶಿ ತರೂರ್ ಆಂಗ್ಲಬಾಷೆಯಲ್ಲಿ ಬರೆದ ʻಆನ್ ಎರಾ ಆಫ್ ಡಾರ್ಕ್ನೆಸ್ʼ ಗದ್ಯ ಪುಸ್ತಕದ ಕನ್ನಡ ಅನುವಾದವಾಗಿದೆ. ಲೇಖಕ ಪ್ರೊ. ಎಸ್.ಬಿ. ರಂಗನಾಥ್ ಇದರ ಅನುವಾದಕರು. ಮೂಲ ಕೃತಿಗೆ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಲಭಿಸಿದೆ. ಕೃತಿಯಲ್ಲಿ ತೀಕ್ಷ್ಯ ಹಾಗೂ ವಿಶಿಷ್ಟ ಸಂಶೋಧನಾತ್ಮಕ ದೃಷ್ಠಿ ಮತ್ತು ಮೊನಚಾದ ವ್ಯಂಗ್ಯ ಮಿಶ್ರಿತ ಶೈಲಿಯಲ್ಲಿ, ಬ್ರಿಟಿಷ್ ಆಡಳಿತವು ಭಾರತಕ್ಕೆ ಹೇಗೆ ವಿಧ್ವಂಸಕಾರಿಯಾಗಿತ್ತು ಎಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ವಿವರಿಸಿದ್ದಾರೆ. ಭಾವನಾತ್ಮಕ ಶೈಲಿಯಲ್ಲಿ ರಚಿಸಲ್ಪಟ್ಟ ಈ ಕೃತಿಯು ಭಾರತ ಇತಿಹಾಸದ ಅತ್ಯಂತ ಪ್ರಮುಖ ಕಾಲಘಟ್ಟಗಳಲ್ಲಿ ಒಂದಾದ ಈ ಅವಧಿಯ ಬಗ್ಗೆ ಇರುವ ಹಲವು ತಪ್ಪು ಕಲ್ಪನೆಗಳನ್ನು ತೊಡೆದುಹಾಕುವಲ್ಲಿ ಪ್ರಯತ್ನಿಸಿದೆ.

ಪುಸ್ತಕ ವಿಮರ್ಶೇ ಶಶಿತರೂರ್ ಬರೆದ ‘ಕಗ್ಗತ್ತಲ ಕಾಲ’ - ಪ್ರಜಾವಾಣಿ
©2025 Book Brahma Private Limited.