
`ಭಾರತ ಜಾಗೃತಿ' ವೈಚಾರಿಕ ಬರಹಗಳ ಸಂಕಲನವನ್ನು ಎಸ್. ಆರ್. ರಾಮಸ್ವಾಮಿ ಅವರು ಸಂಪಾದಿಸಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಧರ್ಮಪಾಲ್ ಎಂಬುವರು ಈ ಕೃತಿಯನ್ನು ಹಿಂದಿಯಲ್ಲಿ ರಚಿಸಿದ್ದಾರೆ. ಖ್ಯಾತ ಗಾಂಧೀವಾದಿ ಮತ್ತು ಇತಿಹಾಸ ಸಂಶೋಧಕ ಧರ್ಮಪಾಲ್ ನೀಡಿದ ಮೂರು ಉಪನ್ಯಾಸಗಳ ಸಂಗ್ರಹ ರೂಪದ ಹೊತ್ತಿಗೆ. ಸ್ವದೇಶಿ ಜಾಗೃತಿಯೇ ಉಪನ್ಯಾಸದ ವಸ್ತು. ಪರಾಧೀನತೆಯ ಪ್ರತಿಫಲನ ಕ್ಷೀಣಿಸಿ ಭಾರತದ ಸ್ವಗೌರವ ಸಾಧನೆಗೆ ಇಲ್ಲಿನ ಚಿಂತನೆಗಳು ಪೂರಕವಾಗಿವೆ. ಉಪನ್ಯಾಸಗಳನ್ನು ಬರಹಕ್ಕೆ ತಂದ ಧರ್ಮಪಾಲ್ ಸಮಾಜಕ್ಕೆ ಬೇಕಾದ ಅಂಶಗಳನ್ನು ಈ ಕೃತಿಯಲ್ಲಿ ನೀಡಿದ್ದಾರೆ.
©2025 Book Brahma Private Limited.