ಅಗ್ರಾಳ ಪುರಂದರ ರೈ

Author : ವಾಮನ ನಂದಾವರ

Pages 60

₹ 45.00




Year of Publication: 2017
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಅಗ್ರಾಳ ಪುರಂದರ ರೈ ಅವರು ಕೃಷಿ, ಸಾಹಿತ್ಯ, ಪತ್ರಿಕೆ, ಸ್ವಾತಂತ್ರ್ಯ ಹೋರಾಟ, ಗಾ೦ಧೀವಾದ, ಅಧ್ಯಾಪನ, ರೈತ ಸ೦ಘಟನೆ, ಶ್ಯಾನುಭೋಗತನ, ಪಠೇಲಿಕೆ, ವ್ಯಾಪಾರ, ಕಲೆ, ಭಾಷಣ, ತುಳು, ಮನೆಮದ್ದು ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ಅವರ ಕಾರ್ಯಕ್ಷೇತ್ರ ಹರಡಿಕೊಂಡಿತ್ತು. ಅವರು ಕರಾವಳಿ ಪರಿಸರದ ಹಳ್ಳಿ ಜೀವನದಲ್ಲಿ ನುರಿತ ಅರಿತ ಬರಹಗಾರರಾಗಿದ್ದರು. ಬೇರೆ ಬೇರೆ ಪತ್ರಿಕೆಗಳಲ್ಲಿ ಅವರ ನಾನಾ ವಿಧವಾದ ಬರಹಗಳು ಆಗಾಗ ಪ್ರಕಟವಾಗುತ್ತಿದ್ದವು. ಸಣ್ಣ ಕತೆ, ಲಘುಹಾಸ್ಯ, ಪ್ರಬಂಧ, ವಿಚಾರ, ವಿನೋದ, ವ್ಯಂಗ್ಯ, ಚುಟುಕ, ಕವನಗಳು ಸಾಹಿತ್ಯಾಕಾಶದಲ್ಲಿ ಆಗಾಗ ಮಿನುಗಿವೆ. ಪಿ.ಆರ್‌. ಅಗ್ರಾಳ, ಪಿ.ಆರ್‌.ಎ. ಮೊದಲಾದ ಹೆಸರುಗಳಿ೦ದ ಅವರು ವಾಚಕ ಜನಕ್ಕೆ ಪರಿಚಿತರಾಗಿದ್ದರು. ಜೀವನದ ಪ್ರತಿಯೊಂದು ಘಟನೆಯನ್ನೂ ಬರೆದು ಬರೆದು, ತಿಕ್ಕಿ ತೀಡಿ ನೋಡುವ ಕುತೂಹಲ ಅವರಿಗಿತ್ತು. ಅವರ ಅನುಭವಗಳನ್ನು ಜನತೆಗೆ ರಸವತ್ತಾದ ತನ್ನದೇ ಆದ ಶೈಲಿಯಿಂದ ನೀಡುವ ಉತ್ಸಾಹವುಳ್ಳವರಾಗಿದ್ದರು.

About the Author

ವಾಮನ ನಂದಾವರ
(15 November 1944)

ಕನ್ನಡ ಮತ್ತು ತುಳು ಭಾಷೆಯ ವಿದ್ವಾಂಸರಾಗಿರುವ ವಾಮನ ನಂದಾವರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ನಂದಾವರ ಗ್ರಾಮದವರು. ಮಂಗಳೂರು ಸಂತ ಅಲೋಶಿಯಸ್ ಕಾಲೇಜು ಬಿ.ಎಸ್‌ಸಿ ಪದವಿ ಪಡೆದ ಅವರು ಮಂಗಳೂರು ಸರಕಾರಿ ಮಹಾವಿದ್ಯಾಲಯದಲ್ಲಿ ಬಿ.ಇಡಿ ಪದವಿ ಪೂರ್ಣಗೊಳಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಎಂ.ಎ (ಕನ್ನಡ) ಪದವೀಧರರಾದ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎ.ವಿವೇಕ ರೈಯವರ ಮಾರ್ಗದರ್ಶನದಲ್ಲಿ 'ಕೋಟಿ ಚೆನ್ನಯ ಜಾನಪದೀಯ ಅಧ್ಯಯನ’ ಮಹಾ ಪ್ರಬಂಧಕ್ಕೆ ಪಿಎಚ್.ಡಿ ಪದವಿ ಗಳಿಸಿದರು. ಬೆಂಗಳೂರುದ ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ಸಹಾಯಕ ಅಧ್ಯಾಪಕರಾಗಿ ಶಿಕ್ಷಣ ವೃತ್ತಿ ಜೀವನ ಆರಂಭಿಸಿದ ಅವರು ಸೇಂಟ್ ...

READ MORE

Related Books