ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ

Author : ಎಚ್‌. ದಿವಾಕರ ಭಟ್‌

Pages 56

₹ 45.00




Year of Publication: 2017
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 215ನೇ ಪುಸ್ತಕವಿದು. ಕಾಂತಾವರ ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ ಹರಿದಾಸ, ಆಶುಕವಿ.  ಪಾವಂಜೆ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯನವರು (1854-1924) ದಕ್ಷಿಣ ಕನ್ನಡದ ಖ್ಯಾತ ಹರಿದಾಸರು, ಶಿವಬ್ರಾಹ್ಮಣ ಸಮುದಾಯದವರಾದ ಅವರು ಗೌಡಸಾರಸ್ವತ ಬ್ರಾಹ್ಮಣ ಸಮುದಾಯದ ಕಾಶೀಮಠದ ಶ್ರೀಭುವನೇಂದ್ರತೀರ್ಥ ಸ್ವಾಮೀಜಿಯವರ ಆಶ್ರಯದಲ್ಲಿದ್ದು ಸಂಸ್ಕೃತ ಭಾಷೆ, ಕಾವ್ಯಾದಿಗಳನ್ನು ಅಭ್ಯಾಸಮಾಡಿದವರು. ದೈತ ಮತದ ತತ್ವಗಳನ್ನೇ ಅನುಸಂಧಾನ ಮಾಡಿ ಮಾಧ್ವ ಸಂಪ್ರದಾಯಕ್ಕನುಸಾರವಾದ ಕೀರ್ತನೆಗಳನ್ನು ರಚಿಸಿದ ಆಶುಕವಿಗಳು ಅವರು. ಕೀರ್ತನೆಗಳಲ್ಲದೆ ಹರಿಕಥೆಯ ಹಾಡುಗಳು, ಪರೂಪದ ಹಾಡುಗಳು, ಮನರಂಜನೆ - ಬೈಗುಳ ಹಾಡುಗಳು ಇತ್ಯಾದಿ ಕನ್ನಡ, ತುಳು (ಕೊಂಕಣಿ?) ಭಾಷೆಗಳಲ್ಲಿ ಸುಮಾರು 300-500 ಕೀರ್ತನೆಗಳನ್ನು ಅವರು ರಚಿಸಿರಬಹುದು ಎಂದು ಅಂದಾಜಿಸಲಾಗಿದೆ. ಅವುಗಳಲ್ಲಿ ಬಹಳಷ್ಟು ಅಲಭ್ಯವಾಗಿವೆ. ಈ ಪುಸ್ತಕದಲ್ಲಿ ಇದುವರೆಗೆ ಅಲಭ್ಯವಾಗಿದ್ದ ಅವರ ಕೆಲವು ರಚನೆಗಳನ್ನು ನೀಡಲಾಗಿದೆ.

About the Author

ಎಚ್‌. ದಿವಾಕರ ಭಟ್‌

ಪಾವಂಜೆಯಲ್ಲಿ(೧೯೫೬) ಜನಿಸಿದ ಯಾಜಿ, ಡಾ. ಎಚ್.ದಿವಾಕರ ಭಟ್‌ ಅವರು ಬಿ.ಎಸ್.ಸಿ, ಸಂಸ್ಕೃತ ಎಂ.ಎ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಮತ್ತು ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ನಿಟ್ಟೆ NMAMIT ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಧಾನ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ಅವರು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ತಂತ್ರಿಗಳಾಗಿದ್ದಾರೆ. 'Do it yourself, 'ಶಾಕ್ತಪಂಥ', 'ಚಿನ್ಮಯ ಮಿಷನ್ ಮಂಗಳೂರು', 'In search of Information Power', 'ನಮ್ಮ ವೇದ ಗುರುಗಳು- ಕೊಕ್ಕಡ ಅನಂತಪದ್ಮನಾಭ ಶಾಸ್ತ್ರಿಗಳು', 'Building Knowledge Centers' ಎಂಬ ಗ್ರಂಥಗಳನ್ನು ಸಂಪಾದಿಸಿ, ಪ್ರಕಟಿಸಿದ್ದಾರೆ. “ಅಸತೋ ...

READ MORE

Related Books