ಜನಾರ್ದನ ಗುರ್ಕಾರ್‌

Author : ಬಿ. ಜನಾರ್ದನ ಭಟ್

Pages 48

₹ 33.00




Year of Publication: 2007
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ನಾಲ್ಕನೆಯ ಪುಸ್ತಕ ಜನಾರ್ದನ ಗುರ್ಕಾರ. ದಕ್ಷಿಣ ಕನ್ನಡದ ಬದುಕು ಮತ್ತು ಪ್ರಕೃತಿಯನ್ನು ತಮ್ಮ ಕಾದಂಬರಿಗಳಲ್ಲಿ ಚಿತ್ರಿಸಿ ಸಾಹಿತ್ಯ ಕೃತಿಗಳಾಗಿಸಿದ ಕಾದಂಬರಿಕಾರ ಜನಾರ್ದನ ಗುರ್ಕಾರ್. 'ಪರಾವಲಂಬಿ', 'ಕೈಮಾಂಸ', 'ಕಾಂತೆಯರ ಕನಸು', 'ದಂಬನ ನಾರು', 'ಗಂಗಾವತಾರ', 'ಗುಡಿಯ ಸುತ್ತಮುತ್ತ' ಮುಂತಾದ 18 ಕಾದಂಬರಿಗಳು; ಎರಕು ಕಥಾಸಂಕಲನಗಳು; ಪ್ರಬಂಧ, ವಿಚಾರ ಸಾಹಿತ್ಯ ಮುಂತಾದ ಪ್ರಕಾರಗಳ ಆರು ಕೃತಿಗಳು ಜನಾರ್ದನ ಗುರ್ಕಾರರನ್ನು ಕನ್ನಡದ ಒಬ್ಬ ಮುಖ್ಯ ಲೇಖಕರನ್ನಾಗಿ ಸ್ಥಾಪಿಸಿವೆ. ಮೂಡಬಿದ್ರಿಯ ಬಳಿಯ ಅಶ್ವತ್ಥಪುರಕ್ಕೆ ಸಮೀಪವಿರುವ ಮುದ್ರಬೆಟ್ಟಿನಲ್ಲಿ ಜನಿಸಿದ (1932) ಗುರ್ಕಾರ್‌ ರೈಲ್ವೆ ಇಲಾಖೆಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. 2015ರಲ್ಲಿ ನಿಧನರಾದರು. ಗುರ್ಕಾರ ಬದುಕು-ಬರಹ ಪರಿಚಯಿಸುವ ಕೃತಿಯಿದು.

About the Author

ಬಿ. ಜನಾರ್ದನ ಭಟ್

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...

READ MORE

Related Books