ಡಾ. ವಿಶ್ವನಾಥ ಕಾರ್ನಾಡ್‌

Author : ಭರತಕುಮಾರ ಪೊಲಿಪು

Pages 52

₹ 45.00




Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಪರಿಣಾಮಕಾರಿ ಕತೆಗರರಾಗಿರುವ ವಿಶ್ವನಾಥ ಕಾರ್ನಾಡರು ಕಾವ್ಯ-ವಿಮರ್ಶೆ, ಸಂಶೋಧನೆ ಮತ್ತು ಅನುವಾದ ಕ್ಷೇತ್ರಗಳಲ್ಲಿ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಪ್ರಗತಿಪರ ಚಿಂತಕರಾಗಿರುವ ಅವರು ಮುಂಬಯಿ ಕನ್ನಡ ಲೋಕದ ಸಂಸ್ಕೃತಿ ಚಿಂತಕರು. ಅವರ ಜೀವನ ಸಾಧನೆಯನ್ನು ಈ ಕೃತಿಯು ಒದಗಿಸುತ್ತದೆ. ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ’ ಸರಣಿಯ 175ನೇ ಕೃತಿಯಿದು.

About the Author

ಭರತಕುಮಾರ ಪೊಲಿಪು

ಮುಂಬಯಿಯ ಸಾಂಸ್ಕೃತಿಕ ರಾಯಭಾರಿ, ಪ್ರತಿಭಾಶಾಲಿ ರಂಗ ನಿರ್ದೇಶಕ, ಚಿಂತಕ ಡಾ.ಭರತ್‌ಕುಮಾರ್ ಪೊಲಿಪು. ಬಹುಭಾಷಿಕ ಸಂವೇದನೆಯನ್ನು ಮೈಗೂಡಿಸಿಕೊಂಡಿರುವ ಅವರು ಕಳೆದ ಮೂರು ದಶಕಗಳಿಂದ ಮುಂಬೈ ಕನ್ನಡ ರಂಗಭೂಮಿಗೆ ಹೊಸನೀರು ಹರಿಸಿದವರಲ್ಲಿ ಮುಖ್ಯರು. ತಮ್ಮ ಪಿಎಚ್.ಡಿ. ಗಾಗಿ ಅವರು ಮುಂಬಯಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಮಹಾಪ್ರಬಂಧ 'ಮುಂಬೈ ಕನ್ನಡ ರಂಗಭೂಮಿ ಒಂದು ತೌಲನಿಕ ಅಧ್ಯಯನ' ಗ್ರಂಥರೂಪದಲ್ಲಿ ಪ್ರಕಟವಾಗಿ ರಂಗಭೂಮಿಯ ಬಹುಮುಖ್ಯ ಆಕರಗ್ರಂಥಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ನಾಡಿಗೆ ನಮಸ್ಕಾರ ಮಾಲೆಗಾಗಿ 'ಡಾ. ವಿಶ್ವನಾಥ ಕಾರ್ನಾಡ್' ಕೃತಿ ರಚಿಸಿದ್ದಾರೆ. ಮುಂಬೈ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿರುವ ಭರತಕುಮಾರ ಪೊಲಿಪು ಅವರು ವೃತ್ತಿಯಿಂದ ಬ್ಯಾಂಕ್ ಅಧಿಕಾರಿ, ರಂಗಭೂಮಿ ...

READ MORE

Related Books