ಬಿ.ಎಚ್‌. ಶ್ರೀಧರ್‌

Author : ಮೋಹನ ಭಾಸ್ಕರ ಹೆಗಡೆ

Pages 56

₹ 45.00




Year of Publication: 2017
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 212ನೇ ಪುಸ್ತಕ ಬಿ.ಹೆಚ್. ಶ್ರೀಧರ್. ವಾತ್ಸಲ್ಯದ ಸಿರಿ ಸಾಹಿತ್ಯದ ಗರಿ ಬಿ.ಹೆಚ್. ಶ್ರೀಧರ್ ಆಧುನಿಕ ಕನ್ನಡದ ಅಪೂರ್ವ ವಿದ್ವತ್ ಕವಿ. ಬಿ.ಎಚ್. ಶ್ರೀಧರರು (1918-1990) ವಿದ್ವತ್ತಿಗೂ, ಕವಿತ್ವಕ್ಕೂ ಹೆಸರಾದ ಕುಂದಾಪುರ ತಾಲೂಕಿನ ಬವುಳಾಡಿ ಹೆಬ್ಬಾರರ ಮನೆತನದವರು. ಮುದ್ದಣನ ಗುರುಗಳಾಗಿದ್ದ ಬವುಳಾಡಿ ವೆಂಕಟರಮಣ ಹೆಬ್ಬಾರರು ಬಿ.ಎಚ್. ಶ್ರೀಧರರ ದೊಡ್ಡಪ್ಪ, ಕವಿ ಗೋಪಾಲಕೃಷ್ಣ ಅಡಿಗರು ಬಿ.ಎಚ್. ಶ್ರೀಧರರ ಸೋದರಳಿಯ. ಶ್ರೀಧರ್ ಅವರು ಪೂನಾ, ಹುಬ್ಬಳ್ಳಿ, ಭಟ್ಕಳ, ಕುಮಟಾ, ಸಿದ್ದಾಪುರಗಳಲ್ಲಿ ಶೈಕ್ಷಣಿಕ ಹುದ್ದೆಗಳಲ್ಲಿದ್ದು ಪ್ರಿನ್ಸಿಪಾಲರಾಗಿ ನಿವೃತ್ತರಾಗಿದ್ದರು. ಅವರ 'ಕಂಟಕಾರಿ ಮಹಾಕಾವ್ಯಂ' ಎಂಬ ಮಹಾನ್ ವಿಡಂಬನಾ ಕಾವ್ಯ ಸಾರಸ್ವತ ಲೋಕಕ್ಕೆ ಶ್ರೀಧರರ ಒಂದು ವಿಶೇಷ ಕೊಡುಗೆ. ಅವರ 'ಜಾತವೇದ' ಕವನ ಸಂಕಲನಕ್ಕೆ ಮುನ್ನುಡಿ ಬರೆದ ವಿ.ಕೃ. ಗೋಕಾಕ್‌ರು ಹೀಗೆ ಹೇಳಿದ್ದಾರೆ: “ನವೋದಯದ ನಿತ್ಯೋತ್ಸವದಲ್ಲಿ ಶ್ರೀಧರರು ಅನೇಕ ದೀಪಗಳನ್ನು ಹಚ್ಚಿದ್ದಾರೆ. ವಿಚಾರ ಪ್ರಧಾನ ಹಾಗೂ ವಿಡಂಬನಾತ್ಮಕ ಕಾವ್ಯ, ವಿಮರ್ಶೆ ಇವು ಅವರ ಮೆಚ್ಚಿನ ಕ್ಷೇತ್ರಗಳು. ಅಲ್ಲಿ ಜನಮನವನ್ನು ಮೆಚ್ಚಿಸುವ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಅವರು 50ಕ್ಕೂ ಮಿಕ್ಕಿ ಕೃತಿಗಳನ್ನು ಕೊಟ್ಟಿದ್ದು ಅವರ ಸಮಗ್ರ ಸಾಹಿತ್ಯ ಕಾವ್ಯ ಮತ್ತು ವಿಮರ್ಶೆ ಎಂಬ ಎರಡು ಸಂಪುಟಗಳಲ್ಲಿ ಲಭ್ಯವಿದೆ.

About the Author

ಮೋಹನ ಭಾಸ್ಕರ ಹೆಗಡೆ

ಲೇಖಕ ಮೋಹನ ಭಾಸ್ಕರ ಹೆಗಡೆಯವಮೂಲತಃ ಹೊನ್ನಾವರ ತಾಲೂಕಿನ ಕರ್ಕಿಯವರು. ಪ್ರಸ್ತುತ ಕುಮಟಾ ತಾಲೂಕಿನ ಹೊಸಹೆರವಟ್ಟಾ ನಿವಾಸಿ. ತಂದೆ ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಭಾಸ್ಕರ ಲಕ್ಷ್ಮಣ ಹೆಗಡೆ. ತಾಯಿ ಪಾರ್ವತಿ. ಪತ್ನಿ ಉಷಾ. ಮಗ ಪ್ರಮೋದ. ಓದಿದ್ದು ಬಿ.ಕಾಂ. (1987) ಡಾ. ಎ. ವಿ. ಬಾಳಿಗಾ ಕಾಲೇಜ್ ಆಫ್ ಕಾಮರ್ಸ್, ಕುಮಟಾದಲ್ಲಿ.  ಯಕ್ಷಗಾನವನ್ನು ಆರಂಭಿಕವಾಗಿ ಕಲಿತಿದ್ದು ಬೆಂಗಳೂರಿನ ಯಕ್ಷದೇಗುಲದಲ್ಲಿ. ಆಮೇಲೆ ವಿಶೇಷವಾಗಿ ಅಭ್ಯಸಿಸಿದ್ದು ಯಕ್ಷಗಾನದ ಸವ್ಯಸಾಚಿ ಮೇರು ಕಲಾವಿದ ಡಾ. ಕೆರೆಮನೆ ಮಹಾಬಲ ಹೆಗಡೆಯವರಲ್ಲಿ. ಅವರನ್ನು ಯಕ್ಷಗಾನದ ಏಕಮೇವ ದಾರ್ಶನಿಕ ಕಲಾವಿದ ಅಂತಲೂ, ಅವಧೂತ ಕಲಾವಿದ ಎಂತಲೂ ...

READ MORE

Related Books