ಉಪಾಧ್ಯಾಯ ಮೂಡುಬೆಳ್ಳೆ

Author : ಅಂಶುಮಾಲಿ (ಭಾಸ್ಕರ ಕನ್ಯಾನ)

Pages 56

₹ 45.00




Year of Publication: 2018
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘ ಪ್ರಕಟಿಸುತ್ತಿರು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ’ಯ  238ನೇ ಕೃತಿ ಉಪಾಧ್ಯಾಯ ಮೂಡುಬೆಳ್ಳೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಲಾವಿದ ಉಪಾಧ್ಯಾಯ ಮೂಡುಬೆಳ್ಳೆ ಅವರು ಕಲಾವಿಮರ್ಶೆ ಮತ್ತು ಕಲಾಶಿಕ್ಷಣದಲ್ಲಿ ವಿಶಿಷ್ಟ ಹೆಸರು. ಕಲಾವಿದ ಉಪಾಧ್ಯಾಯ ಮೂಡುಬೆಳ್ಳೆ ಅವರು ’ಉಪಾಧ್ಯಾಯ ಮೂಡುಬೆಳ್ಳಿ' ಎಂದೇ ಪ್ರಸಿದ್ದರು. ರಾಧಾಕೃಷ್ಣ ಉಪಾಧ್ಯಾಯರು ತೈಲವರ್ಣ, ಜಲವರ್ಣ, ಕಾರ್ಟೂನ್, ಏಕರೇಖಾಚಿತ್ರ, ಎನಾಮೆಲ್ ಪೈಂಟ್, ಆಕ್ರಿಲಿಕ್, ಆಯಿಲ್ ಪೇಸ್ಟಲ್, ಟೆಂಪರಾ, ರಂಗೋಲಿ, ಮಂಡಲ, ತಟ್ಟಿ ಚಿತ್ರ, ಭಿತ್ತಿ ಚಿತ್ರ, ಫೋಟೋಗ್ರಫಿ ಇತ್ಯಾದಿ ಬಹುವಿಧ ಕಲೆಗಳಲ್ಲಿ ಪರಿಣತರು. ಕಲಾವಿಮರ್ಶಕರಾಗಿಯೂ ಅವರ ಕೊಡುಗೆಯಿದೆ. ಅವರ ಜೀವನ-ಸಾಧನೆಯನ್ನು ಈ ಕೃತಿ ಕಟ್ಟಿಕೊಡುತ್ತದೆ.

 

About the Author

ಅಂಶುಮಾಲಿ (ಭಾಸ್ಕರ ಕನ್ಯಾನ)

'ಅಂಶುಮಾಲಿ' (ಭಾಸ್ಕರ ಕನ್ಯಾನ) ಮೈಸೂರು ವಿಶ್ವವಿದ್ಯಾನಿಲಯದ ಎಂ.ಎ.(ಇಂಗ್ಲಿಷ್) ಪದವೀಧರ. ಅಂಶುಮಾಲಿ ಅಂಚೆ ಇಲಾಖೆಯಲ್ಲಿ ಹೆಡ್ ಪೋಸ್ಟ್ ಮಾಸ್ಟರ್ ಆಗಿದ್ದವರು. ಸಾಹಿತ್ಯ ಮತ್ತು ಸಂಗೀತ ಅವರ ಪ್ರವೃತ್ತಿಗಳು, ಕನ್ನಡ ಮತ್ತು ತುಳು ಭಾಷೆಗಳ ಕವಿಯಾಗಿ, ಕಾದಂಬರಿಕಾರರಾಗಿ ತಮ್ಮದೇ ಆದ ವಿಶಿಷ್ಟ ಲಾಸ್ಯ ದರ್ಶನದಿಂದ ಬದುಕನ್ನು ಪರಿಶೀಲಿಸುವ ಅಂಶುಮಾಲಿ ಕಡೆಂಗೋಡ್ಲು ಕಾವ್ಯಪ್ರಶಸ್ತಿ, ಮುದ್ದಣ ಕಾವ್ಯಪ್ರಶಸ್ತಿ, ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗಳನ್ನು ಪಡೆದಿರುವ ಅಪರೂಪದ ಉಭಯಭಾಷಾ ಕವಿ. ಬಂಟ್ವಾಳ ತಾಲೂಕು ೧೧ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿದ್ದ ಅಂಶುಮಾಲಿ ಅವರ ಕೃತಿಗಳು: ಕವನ ಸಂಕಲನಗಳು - ಕನ್ಯಾನ, ಪ್ರತಿಭಾನ, ಕನ್ನಡ-ಕ. ನಾಟಕಗಳು ...

READ MORE

Related Books