ಕೃಷ್ಣ ಸೋಮಯಾಜಿ

Author : ಸದಾನಂದ ನಾರಾವಿ

Pages 56

₹ 45.00




Year of Publication: 2018
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ  'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 231ನೇ ಕೃತಿ. ಕಾಯಕ ಯೋಗಿ ಕೃಷ್ಣ ಸೋಮಯಾಜಿ ಬಂಟ್ವಾಳದ ಕೃಷ್ಣ ಸೋಮಯಾಜಿಯವರು ಕಾಯಕಯೋಗಿ ಎಂಬ ಪರಿಕಲ್ಪನೆಗೆ ಉದಾಹರಣೆಯಂತಿದ್ದಾರೆ. ಅವರು ಗಾಂಧೀಜಿ, ವಿವೇಕಾನಂದರು, ಗೋಖಲೆಯವರು, ವಿನೋಬಾಭಾವೆ ಮುಂತಾದ ನಾಯಕರನ್ನು ಆದರ್ಶವಾಗಿ ಇಟ್ಟುಕೊಂಡಿದ್ದವರು. ಜೀವನದ ಕೊನೆಯ ತನಕವೂ ಖಾದಿಬಟ್ಟೆ ಮತ್ತು ಟೋಪಿ ಧರಿಸುತ್ತಿದ್ದ ಸೋಮಯಾಜಿಯವರು ಪ್ರಾರಂಭದಲ್ಲಿ ಯಶಸ್ವೀ ಜವಳಿ ಉದ್ಯಮಿಯಾಗಿದ್ದರೂ ಅದನ್ನು ಬಿಟ್ಟುಕೊಟ್ಟು ಕೃಷಿಯನ್ನು ಒಂದು ಜೀವನ ಪ್ರೀತಿಯ ಅಭಿವ್ಯಕ್ತಿಯಾಗಿ ಹಮ್ಮಿಕೊಂಡಿದ್ದರು. ತಮ್ಮ ಸ್ವಂತ ಖರ್ಚಿನಲ್ಲಿ ಗ್ರಾಮಕ್ಕೆ ರಸ್ತೆಯನ್ನು ಮಾಡಿಸುವುದು, ಭೂರಹಿತರಿಗೆ ಭೂಮಿ ಒದಗಿಸಿಕೊಟ್ಟು ಕೃಷಿಗೆ ನೆರವಾಗುವುದು ಮುಂತಾಗಿ ಸದ್ದಿಲ್ಲದೆ ಸಮಾಜಕಲ್ಯಾಣ ಮತ್ತು ಗ್ರಾಮಾಭಿವೃದ್ಧಿಯನ್ನು ಸಾಧಿಸಿದವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ತತ್ವಾದರ್ಶ ಗಳನ್ನು ಪಾಲಿಸುತ್ತಾ ಜಾತಿಭೇದವಿಲ್ಲದೆ ಸರ್ವರ ಬದುಕಿನ ಏಳಿಗೆಯ ಸೂತ್ರಗಳನ್ನು ರಚಿಸಿ ಅನುಷ್ಠಾನಕ್ಕೆ ತಂದವರು ಕಾಯಕಯೋಗಿ ಕೃಷ್ಣ ಸೋಮಯಾಜಿಯವರು. ಅವರ ಜೀವನ ಸಾಧನೆಯನ್ನು ಈ ಪುಸ್ತಕ ಕಟ್ಟಿಕೊಡುತ್ತದೆ.

About the Author

ಸದಾನಂದ ನಾರಾವಿ

ಸದಾನಂದ ನಾರಾವಿಯವರು ಅಂಚೆ ಇಲಾಖೆಯಲ್ಲಿ 29 ವರ್ಷ ಸೇವೆಸಲ್ಲಿಸಿ ನಿವೃತ್ತರಾಗಿ ಪ್ರಸ್ತುತ ಕಾಂತಾವರ ಕನ್ನಡ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಕತೆ, ಕವನ, ಲೇಖನಗಳನ್ನು ಬರೆಯುವ ಸದಾನಂದ ನಾರಾವಿಯವರು 'ಮುತ್ತುಮಲ್ಲಿಗೆ', 'ಸಂರಚನೆಯ ಸುತ್ತಮುತ್ತ' (ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಶಸ್ತಿ ವಿಜೇತ ಕೃತಿ), 'ಉಜ್ರೆ ಈಶ್ವರ ಭಟ್', 'ಡಾ.ಕೆ, ಪ್ರಭಾಕರ ಆಚಾರ್' ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಬೆಂಗಳೂರಿನ ವಿಶ್ವೇಶ್ವರಯ್ಯ ಪ್ರಶಸ್ತಿ, ತುಳು ಕತೆಯೊಂದಕ್ಕೆ ತುಳು ಒಕ್ಕೂಟದ ಪ್ರಥಮ ಬಹುಮಾನ ಇತ್ಯಾದಿ ಗೌರವಗಳಿಗೆ ಪಾತ್ರರಾಗಿದ್ದಾರೆ. ತುಳು ಭಾಷೆ ಹಾಗೂ ಸಂಸ್ಕೃತಿಗೆ ಸದಾನಂದ ನಾರಾವಿಯವರ ...

READ MORE

Related Books