ಮಿಜಾರು ಅಣ್ಣಪ್ಪ

Author : ಯೋಗೀಶ್ ಕೈರೋಡಿ

Pages 56

₹ 45.00




Year of Publication: 2017
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ ಕಾಂತಾವರ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 218 ನೇ ಪುಸ್ತಕ ’ಮಿಜಾರು ಅಣ್ಣಪ್ಪ’. ಹಾಸ್ಯ ಚಕ್ರವರ್ತಿ ಮಿಜಾರು ಅಣ್ಣಪ್ಪ ತೆಂಕುತಿಟ್ಟಿನ ಅಗ್ರಗಣ್ಯ ಕಲಾವಿದರಲ್ಲಿ ಅಣ್ಣಪ್ಪ ಒಬ್ಬರು. ಸುಮಾರು ಏಳು ದಶಕಗಳ ಕಾಲದ ಕಲಾಯಾತ್ರೆಯಲ್ಲಿ ತೊಡಗಿಸಿ ಕೊಂಡು ತನ್ನ ವಿಶಿಷ್ಟ ಶೈಲಿಯ ಹಾಸ್ಯದ ಮೂಲಕ ನಾಡಿನಾದ್ಯಂತ ಜನಪ್ರಿಯರಾದವರು. ಕೂಡ್ಲು, ಕುಂಡಾವು, ಕರ್ನಾಟಕ ಹಾಗೂ ಕಟೀಲು ಮೇಳಗಳಲ್ಲಿ ಕಲಾವಿದರಾಗಿ ಮೆರೆದಿದ್ದ ಅಣ್ಣಪ್ಪರು ಕರ್ನಾಟಕ ಮೇಳದಲ್ಲಿ ಸುದೀರ್ಘ ಕಾಲ ತಿರುಗಾಟ ನಡೆಸಿದವರು. ಪುರಾಣ ಪ್ರಸಂಗಗಳ ಮಕರಂದ, ವಿಜಯ, ಬಾಹುಕ, ದಾರುಕ, ರಾವಣ ಸನ್ಯಾಸಿ, ರಜಕ ಮೊದಲಾದ ಪಾತ್ರಗಳನ್ನು ರಸವತ್ತಾಗಿ ರೂಪಿಸಿದವರು. ತೆಂಕುತಿಟ್ಟಿನ ತುಳು ಯಕ್ಷಗಾನವನ್ನು ಸುವರ್ಣ ಅಧ್ಯಾಯವನ್ನಾಗಿ ರೂಪಿಸುವಲ್ಲಿ ಅಣ್ಣಪ್ಪರ ಪಾತ್ರದ ಕೊಡುಗೆ ಉಲ್ಲೇಖನೀಯ. ಅಣ್ಣಪ್ಪ ಅವರ ಜೀವನ-ಸಾಧನೆಯನ್ನು ಪರಿಚಯಿಸುವ ಕೃತಿಯಿದು.

About the Author

ಯೋಗೀಶ್ ಕೈರೋಡಿ

ಮೂಡುಬಿದಿರೆಯ ಆಳ್ವಾಸ್ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಡಾ. ಯೋಗೀಶ್ ಕೈರೋಡಿ ಅವರು ಮಂಗಳೂರು ವಿ.ವಿ. ಪದವಿ ಕಾಲೇಜು ಕನ್ನಡ ಪ್ರಾಧ್ಯಾಪಕರ ಸಂಘ 'ವಿಕಾಸ'ದ ಕಾರ್ಯದರ್ಶಿ. ’ತೆಂಕುತಿಟ್ಟು ಯಕ್ಷಗಾನ ರಂಗಭೂಮಿಯಲ್ಲಿ ಚಲನಶೀಲತೆ' ಎಂಬ ವಿಷಯದಲ್ಲಿ ಪಿಎಚ್.ಡಿ. ಪಡೆದಿರುವ ಅವರು 'ಅನ್ನ ಬಣ್ಣಗಳ ಸುತ್ತ' (2006) ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ’ಕವಲು ದಾರಿಯಲ್ಲೊಂದು ನಕ್ಷತ್ರ' (2009) ಎಂಬ ಲೇಖನಗಳ ಸಂಕಲನವನ್ನೂ ಪ್ರಕಟಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 'ಮದಪ್ಪರಾವಂದಿ ತುಳುವೆರ್' ಮಾಲೆಗಾಗಿ 'ಸೇಡಿಯಾಪು ಕೃಷ್ಣ ಭಟ್ಟ' (2014) ಕೃತಿಯನ್ನು ರಚಿಸಿಕೊಟ್ಟಿದ್ದಾರೆ. ಇವರ ಅಧ್ಯಯನ ಗ್ರಂಥ 'ತುಳುತಿಟ್ಟು ಯಕ್ಷಗಾನ ...

READ MORE

Related Books