ಎ.ಬಿ. ಶೆಟ್ಟಿ

Author : ಎಚ್‌. ದಿವಾಕರ ಭಟ್‌

Pages 56

₹ 45.00




Year of Publication: 2017
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರದ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಅಡಿಯಲ್ಲಿ ಪ್ರಕಟಿಸಿದ 189ನೇ ಪುಸ್ತಕ ಎ.ಬಿ. ಶೆಟ್ಟಿ. ಬ್ಯಾಂಕ್ ವ್ಯವಹಾರದ ಮೂಲಕ ಸಮಾಜವನ್ನು ಆರ್ಥಿಕ ಮುಗ್ಗಟ್ಟಿನಿಂದ ಎತ್ತುವ ಉದ್ದೇಶದಿಂದ ಶೆಟ್ಟರು 2ನೇ ಫೆಬ್ರವರಿ 1931ರಂದು ವಿಜಯ ಬ್ಯಾಂಕ್ ಎಂಬ ನಾಮಕರಣದೊಂದಿಗೆ ಬ್ಯಾಂಕ್‌ ಸ್ಥಾಪಿಸಿದರು. ತಾನೇ ಸ್ಥಾಪಕ ಅಧ್ಯಕ್ಷನಾಗಿ ಜಿಲ್ಲೆಯ ಮೊದಲ ಶಾಖೆಯ ಉದ್ಘಾಟನೆಯನ್ನು ಜಿಲ್ಲಾ ಕಲೆಕ್ಟರ್ ಆಗಿದ್ದ ಜವಾದಾ ಹುಸೇನ್ ಇವರ ಕೈಯಿಂದ ನೆರವೇರಿಸಿದರು. 1931-37ರವರೆಗೆ ತಾನೇ ಅಧ್ಯಕ್ಷ ಸ್ಥಾನದಲ್ಲಿದ್ದು ಬ್ಯಾಂಕ್‌ನ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಂಡು ಬಂದರು. ಶೆಟ್ಟರು ಅಂದುಕೊಂಡಂತೆ ವಿಜಯ ಬ್ಯಾಂಕ್‌ನ ಸ್ಥಾಪನೆ ದಕ್ಷಿಣ ಕನ್ನಡ ಕೃಷಿಕ ಸಮಾಜದಲ್ಲಿ ನೂತನ ಅಧ್ಯಾಯನವನ್ನೇ ಪ್ರಾರಂಭಿಸಿದರು. ಬಂಟರ ಸಮಾಜದಲ್ಲಿ ವ್ಯಾಪಾರ ವಹಿವಾಟುಗಳ ಕುರಿತು ಜಾಣೆ ಕೌಶಲ್ಯ, ಸಿದ್ಧಿಸಿತ್ತು. ಹೀಗೆ ವಿಧಾಯಕ ಕೆಲಸ ಮಾಡಿದ ಎ.ಬಿ. ಶೆಟ್ಟಿ ಅವರ ಜೀವನ-ಸಾಧನೆಯನ್ನು ಈ ಕೃತಿಯು ಕಟ್ಟಿಕೊಡುತ್ತದೆ.

About the Author

ಎಚ್‌. ದಿವಾಕರ ಭಟ್‌

ಪಾವಂಜೆಯಲ್ಲಿ(೧೯೫೬) ಜನಿಸಿದ ಯಾಜಿ, ಡಾ. ಎಚ್.ದಿವಾಕರ ಭಟ್‌ ಅವರು ಬಿ.ಎಸ್.ಸಿ, ಸಂಸ್ಕೃತ ಎಂ.ಎ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಮತ್ತು ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ನಿಟ್ಟೆ NMAMIT ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಧಾನ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ಅವರು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ತಂತ್ರಿಗಳಾಗಿದ್ದಾರೆ. 'Do it yourself, 'ಶಾಕ್ತಪಂಥ', 'ಚಿನ್ಮಯ ಮಿಷನ್ ಮಂಗಳೂರು', 'In search of Information Power', 'ನಮ್ಮ ವೇದ ಗುರುಗಳು- ಕೊಕ್ಕಡ ಅನಂತಪದ್ಮನಾಭ ಶಾಸ್ತ್ರಿಗಳು', 'Building Knowledge Centers' ಎಂಬ ಗ್ರಂಥಗಳನ್ನು ಸಂಪಾದಿಸಿ, ಪ್ರಕಟಿಸಿದ್ದಾರೆ. “ಅಸತೋ ...

READ MORE

Related Books