ಶಾಂತಾ ಮಲ್ಲೇಶರಾವ್‌

Author : ಎಚ್.ಎಂ. ನಾಗರಾಜರಾವ್ ಕಲ್ಕಟ್ಟೆ

Pages 56

₹ 45.00




Year of Publication: 2019
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ.
Phone: 8548933733

Synopsys

ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟಿಸಿರುವ 285ನೇ ಕೃತಿ ’ಶಾಂತಾ ಮಲ್ಲೇಶರಾವ್‌’. ಹಿರಿಯ ನಾಟಿವೈದ್ಯೆ ಎಂದು ಹೆಸರು ಮಾಡಿರುವ ಶಾಂತಾ ಮಲ್ಲೇಶರಾವ್‌ರವರು ಹುಟ್ಟಿದ್ದು ಉಡುಪಿ ತಾಲ್ಲೂಕಿನ ಸಾಸ್ತಾನದ ಪಕ್ಕದ ಪಾಂಡೇಶ್ವರದಲ್ಲಿ. ಶೃಂಗೇರಿಯಲ್ಲಿ ಶಾಂತಮ್ಮ ಎಂದೇ ಪ್ರಸಿದ್ಧರಾದ ಅವರು ಎಂಬತ್ತು ವಯಸ್ಸಿನ ತುಂಬುಜೀವಿ. ಪ್ರತಿದಿನ ಬರುವ ರೋಗಿಗಳಿಗೆ ಈಗಲೂ ಆರೋಗ್ಯ ಸಂಜೀವಿನಿಯಾಗಿ, ಅವರ ಪ್ರೀತಿಯ ನೇರ ಮಾತುಗಳಿಂದ, ರೋಗಿಗಳಿಗೆ ಆತ್ಮವಿಶ್ವಾಸದ ಧನಿಯಾಗಿದ್ದಾರೆ. ಅವರ ಬಳಿ ಚಿಕಿತ್ಸೆಗೆ ರಾಜ್ಯದೆಲ್ಲೆಡೆಯಿಂದ ಬರುತ್ತಾರೆ.

About the Author

ಎಚ್.ಎಂ. ನಾಗರಾಜರಾವ್ ಕಲ್ಕಟ್ಟೆ

ಲೇಖಕ, ಗಾಯಕ, ನಾಟಕಕಾರ ಎಚ್. ಎಂ. ನಾಗರಾಜರಾವ್ ಕಲ್ಕಟ್ಟೆ ಪ್ರಸ್ತುತ ಚಿಕ್ಕಮಗಳೂರು ತಾಲ್ಲೂಕು ಕಳಸಾಪುರದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರು. ವಿದ್ಯಾರ್ಥಿ ಜೀವನದಲ್ಲಿ ಇವರು ಕಲಿಕೆಯಲ್ಲಿ ಚಿನ್ನದ ಪದಕಗಳನ್ನು ಗಳಿಸಿದವರು. ಸಾಹಿತ್ಯ, ಸಂಗೀತ, ಅಭಿನಯ, ಸಾಂಸ್ಕೃತಿಕ ಸಂಘಟನೆ, ಸಮಾಜಸೇವೆ, ಧಾರ್ಮಿಕ ಸೇವೆ ಹೀಗೆ ಹಲವು ಕ್ಷೇತ್ರಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಅವರ ಸಾಹಿತ್ಯವಿರುವ ನೂರಕ್ಕೂ ಹೆಚ್ಚು ಅಡಕ ಮುದ್ರಿಕೆಗಳು ಲೋಕಾರ್ಪಣೆಗೊಂಡಿವೆ. ಕಾಂತಾವರ ಕನ್ನಡ ಸಂಘವೇ ಪ್ರಕಟಿಸಿದ 'ಕನ್ನಡ ಕೋಗಿಲೆ ಪಿ. ಕಾಳಿಂಗರಾವ್' ಹಾಗೂ ’ಪ್ರಥಮ ಪುಟ’, ’ಬೆಳಕು’ ಪುಸ್ತಕವೂ ಸೇರಿ ಈವರೆಗೆ ಇಪ್ಪತ್ತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಆರು ಕೃತಿಗಳನ್ನು ...

READ MORE

Related Books