ಬಿ.ಜಿ. ಮೋಹನ್‌ದಾಸ್‌

Author : ಅಂಶುಮಾಲಿ (ಭಾಸ್ಕರ ಕನ್ಯಾನ)

Pages 56

₹ 45.00




Year of Publication: 2017
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟಿಸಿರುವ 185ನೇ ಕೃತಿ ಬಿ.ಜಿ. ಮೋಹನ್‌ದಾಸ್‌. ದುಬಾಯಿ ಕರ್ನಾಟಕ ಸಂಘದ ಮೂಲಕ ನಾಡು ನುಡಿಗೆ ಸೇವೆ ಸಲ್ಲಿಸಿದ ಸಾಧಕ, ಹೊರನಾಡ ಕನ್ನಡಿಗ ಬಿ. ಜಿ. ಮೋಹನದಾಸ್ . ಸದ್ಯ ಮಣಿಪಾಲದಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಅವರು ಕುಂದಾಪುರ ತಾಲೂಕಿನ ಬಿಜೂರು ಎಂಬ ಹಳ್ಳಿಯವರು. ಬಿಜೂರು ಗೋವಿಂದಪ್ಪ ಮೋಹನ್‌ದಾಸ್, ತಂದೆ-ಬೆನ್ನೂರು ಗೋವಿಂದಪ್ಪ, ತಾಯಿ-ಸೀತಾದೇವಿ. ಇವರಿಬ್ಬರೂ ಬಿಜೂರಿನವರೇ. ತಂದೆ ಗೋವಿಂದಪ್ಪನವರು ಪೊಲೀಸ್ ಉದ್ಯೋಗದಲ್ಲಿದ್ದು ಹೆಚ್ಚಾಗಿ ಮಲೆನಾಡು ಗಳಲ್ಲೇ ಕಾರ್ಯ ನಿರ್ವಹಿಸಿದ್ದು ಆಗಾಗ ವರ್ಗಾವಣೆ ಹೊಂದುತ್ತಿದ್ದರು. ಆದುದರಿಂದಲೇ ಮೋಹನ್‌ದಾಸ್ ಅವರ ಬಾಲ್ಯಾವಸ್ಥೆ ಬೇರೆ ಬೇರೆ ಊರುಗಳಲ್ಲಿ ಬೆಳೆದುಬಂತು. ಅವರ ವಿದ್ಯಾಭ್ಯಾಸ ನಡೆದಿರುವುದು ಹೀಗೆ-ಒಂದನೆಯ ತರಗತಿ ಆಗುಂಬೆ, ಎರಡನೆಯ ತರಗತಿ ತೀರ್ಥಹಳ್ಳಿಯ ಮಾಳೂರು, ಮೂರನೆಯ ತರಗತಿಯಿಂದ ಭದ್ರಾವತಿ, ಉಳಿದ ತರಗತಿಗಳು ಸಂತೆಬೆನ್ನೂರು. ಮಲೆನಾಡಿನಿಂದ ಕರಾವಳಿ ಪ್ರದೇಶಕ್ಕೆ ವರ್ಗಾವಣೆಯಾಗಿ ಬಂದ ಮೇಲೆ ಬೈಂದೂರು ಪ್ರೌಢಶಾಲೆಯಲ್ಲಿ ಸೇರಿಕೊಂಡರು. ಮುಂದೆ ಉಡುಪಿ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ. ಆಯಿತು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪಡೆದರು. ದುಬೈಗೆ ತೆರಳಿದ ಮೋಹನ್‌ದಾಸ್‌ ಅವರ ಜೀವನ-ಸಾಧನೆಯನ್ನು ಈ ಕೃತಿ ಕಟ್ಟಿಕೊಡುತ್ತದೆ.

About the Author

ಅಂಶುಮಾಲಿ (ಭಾಸ್ಕರ ಕನ್ಯಾನ)

'ಅಂಶುಮಾಲಿ' (ಭಾಸ್ಕರ ಕನ್ಯಾನ) ಮೈಸೂರು ವಿಶ್ವವಿದ್ಯಾನಿಲಯದ ಎಂ.ಎ.(ಇಂಗ್ಲಿಷ್) ಪದವೀಧರ. ಅಂಶುಮಾಲಿ ಅಂಚೆ ಇಲಾಖೆಯಲ್ಲಿ ಹೆಡ್ ಪೋಸ್ಟ್ ಮಾಸ್ಟರ್ ಆಗಿದ್ದವರು. ಸಾಹಿತ್ಯ ಮತ್ತು ಸಂಗೀತ ಅವರ ಪ್ರವೃತ್ತಿಗಳು, ಕನ್ನಡ ಮತ್ತು ತುಳು ಭಾಷೆಗಳ ಕವಿಯಾಗಿ, ಕಾದಂಬರಿಕಾರರಾಗಿ ತಮ್ಮದೇ ಆದ ವಿಶಿಷ್ಟ ಲಾಸ್ಯ ದರ್ಶನದಿಂದ ಬದುಕನ್ನು ಪರಿಶೀಲಿಸುವ ಅಂಶುಮಾಲಿ ಕಡೆಂಗೋಡ್ಲು ಕಾವ್ಯಪ್ರಶಸ್ತಿ, ಮುದ್ದಣ ಕಾವ್ಯಪ್ರಶಸ್ತಿ, ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗಳನ್ನು ಪಡೆದಿರುವ ಅಪರೂಪದ ಉಭಯಭಾಷಾ ಕವಿ. ಬಂಟ್ವಾಳ ತಾಲೂಕು ೧೧ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿದ್ದ ಅಂಶುಮಾಲಿ ಅವರ ಕೃತಿಗಳು: ಕವನ ಸಂಕಲನಗಳು - ಕನ್ಯಾನ, ಪ್ರತಿಭಾನ, ಕನ್ನಡ-ಕ. ನಾಟಕಗಳು ...

READ MORE

Related Books