ನಾವರಿಯದ ದೇರಾಜೆ

Author : ಪ್ರಸಾದ ರಕ್ಷಿದಿ

Pages 56

₹ 45.00




Year of Publication: 2015
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘ ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯ 94ನೇ ಕೃತಿಯಿದು. ಕನ್ನಡದ ಪ್ರಮುಖ ಕಲಾವಿದ - ಸಾಹಿತಿಗಳಲ್ಲಿ ಒಬ್ಬರಾದ ದೇರಾಜೆ ಸೀತಾರಾಮಯ್ಯ ಅವರನ್ನು ಕುರಿತ ಪುಸ್ತಕವಿದು. ತಮ್ಮ ವಾಕ್ ವೈಖರಿಯಿಂದ ಯಕ್ಷಗಾನ - ತಾಳಮದ್ದಳೆ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ ದೇರಾಜೆ ಅವರ ಮಾತುಗಾರಿಕೆಯಲ್ಲಿನ ಧ್ವನಿ - ಅರ್ಥ - ರಸ ವಿಲಾಸ ಗಮನ ಸೆಳೆಯುತ್ತಿದ್ದವು. ಅವರ ಕೆಲವು ಪ್ರಕಟಿತ ಕೃತಿಗಳು: ಭೀಷ್ಮಾರ್ಜುನ ( ಯಕ್ಷಗಾನ ಪ್ರಸಂಗಕ್ಕೆ ಅರ್ಥ ) (1950), ಪ್ರಿಯದರ್ಶನಂ ( ಪದ್ಯಗಂಧಿ ಗದ್ಯ) (1953), ಧರ್ಮದಾಸಿ ( ನಾಟಕ ) (1955), ಯಕ್ಷಗಾನ ವಿವೇಚನೆ ( ಪ್ರಬಂಧ) (1957), ಸುಭದ್ರಾರ್ಜುನ ( ಪ್ರಸಂಗಕ್ಕೆ ಅರ್ಥ) (1959), ಶ್ರೀರಾಮ ಚರಿತಾಮೃತಂ (ಸಂಪೂರ್ಣ ಗದ್ಯ ರಾಮಾಯಣ ) (1960), ವಿಚಾರ ವಲ್ಲರಿ ( ವೈಚಾರಿಕ) (1972), ಧರ್ಮ ದರ್ಶನ ( ವೈಚಾರಿಕ ) (1973).

About the Author

ಪ್ರಸಾದ ರಕ್ಷಿದಿ

ಹಾಸನ ಜಿಲ್ಲೆಯ ಸಕಲೇಶಪುರದವರಾದ ಪ್ರಸಾದ ರಕ್ಷಿದಿ ಅವರು ಖ್ಯಾತ ರಂಗಕರ್ಮಿ. ಬಿಎಸ್ಸಿ ಪದವೀಧರ ಆಗಿರುವ ಅವರು ನಾಟಕ ರಚನೆ, ನಟನೆ, ರಂಗ ಸಂಘಟನೆ, ನಿರ್ದೇಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಮ್ಮ ಎಲುಬುಗಳ ಮೇಲೆ, ಅನಾಮಿಕರು, ಸತ್ಯಕ್ಕೆ ಸಾವಿಲ್ಲ, ಮಾಯಾಮೃಗ, ಪ್ಲಾಂಟರ್ ಪರಮೇಶಿ, ಧನ್ವಂತರಿಯ ಚಿಕಿತ್ಸೆ ಅವರು ನಿರ್ದೇಶಿಸಿದ ನಾಟಕಗಳು. ನಮ್ಮ ನಡುವಿನ ತೇಜಸ್ವಿ ಆಪ್ತವಾದ ವ್ಯಕ್ತಿಚಿತ್ರ. ಬೆಳ್ಳೆಕೆರೆ ಹಳ್ಳೀ ಥೇಟರ್ ಒಂದು ಗ್ರಾಮೀಣ ರಂಗಭೂಮಿಯ ಆತ್ಮೀಯ ಆತ್ಮಕಥನ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಂದ  ಸಾಂಸ್ಕೃತಿಕ ಹಾಗೂ ರಂಗ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುವ ಅವರು ಜೈ ಕರ್ನಾಟಕ ...

READ MORE

Related Books