ರಮಾನಂದ ಘಾಟೆ

Author : ಬಿ. ಜನಾರ್ದನ ಭಟ್

Pages 56

₹ 45.00




Year of Publication: 2017
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಸಣ್ಣಕತೆಗಾರ ರಮಾನಂದ ಘಾಟೆ ಅವರನ್ನು ಕುರಿತ ಪುಸ್ತಕವಿದು. ಕಾಂತಾವರದ ಕನ್ನಡ ಸಂಘವು ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯಲ್ಲಿ ಪ್ರಕಟವಾದ 176ನೇ ಕೃತಿಯಿದು. ಕನ್ನಡ ನವೋದಯ ಸಾಹಿತ್ಯದ ಗದ್ಯ ಲೇಖಕ ರಮಾನಂದ ಅವರು ಕನ್ನಡದ ಮರೆಯಬಾರದ ಕತೆಗಾರರಲ್ಲಿ ಒಬ್ಬರು. ರಮಾನಂದ ಘಾಟೆಯವರ ಸಣ್ಣಕತೆಗಳ ನಾಯಕಿಯ ಹೆಸರು ಸೀತಾರತ್ನ. ಆ ಕಾಲದಲ್ಲಿ ಘಾಟೆಯವರು ಇಂಗ್ಲಿಷಿನ ಪಿ.ಜಿ.ವುಡ್‌ಹೌಸ್‌ ಸೃಷ್ಟಿಸಿದ ’ಜೀವ್ಸ್‌’ ಪಾತ್ರದಂತೆ ಘಾಟೆಯವರು ’ಸೀತಾರತ್ನ’ ಎಂಬ ಪಾತ್ರ ಸೃಷ್ಟಿಸಿದ್ದರು. ಆ ಕಾಲದ ಪತ್ತಿಕೆಗಳಲ್ಲಿ ಘಾಟೆಯವರ ಈ ಪ್ರಯತ್ನದ ಬಗ್ಗೆ ಶ್ಲಾಘನೆ ಪ್ರಕಟವಾಗಿತ್ತು. ಕಾಂತಾವರದ ಕನ್ನಡ ಸಂಘ ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯ 176ನೇ ಕೃತಿಯಿದು.

About the Author

ಬಿ. ಜನಾರ್ದನ ಭಟ್

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...

READ MORE

Related Books