ಸಿರಿಬಾಗಿಲು ವೆಂಕಪ್ಪಯ್ಯ

Author : ರಾಧಾಕೃಷ್ಣ ಕೆ. ಉಳಿಯತ್ತಡ್ಕ

Pages 56

₹ 45.00




Year of Publication: 2018
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರದ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಅಡಿಯಲ್ಲಿ ಪ್ರಕಟಿಸಿದ 252ನೇ ಪುಸ್ತಕ ಸಿರಿಬಾಗಿಲು ವೆಂಕಪ್ಪಯ್ಯ. ಸಾಹಿತಿ, ಸಂಶೋಧಕ ಸಿರಿಬಾಗಿಲು ವೆಂಕಪ್ಪಯ್ಯ ಅವರು ಕಾಸರಗೋಡಿನ ಸಿರಿಬಾಗಿಲು ಎಂಬ ಊರಿನ ಪೋಸ್ಟ್ ಮಾಸ್ಟರ್ ಆಗಿದ್ದರು. ಸಿರಿಬಾಗಿಲು ವೆಂಕಪ್ಪಯ್ಯ ಅವರು ಕನ್ನಡನಾಡಿನ ಒಬ್ಬ ಅಪೂರ್ವ ಸಾಹಿತಿ, ಅವರು ಸ್ಥಳೀಯ ಇತಿಹಾಸ ಸಂಶೋಧನೆಯಲ್ಲಿ ಆಸಕ್ತಿ ಇದ್ದ ಚಿಂತಕ ಮತ್ತು ಬರಹಗಾರ. ಅವರು 1969ರಲ್ಲಿ ಪ್ರಕಟಿಸಿದ 'ಜಗಜಟ್ಟಿ ಬಾಚ' ಒಂದು ಅಪೂರ್ವ ಸ್ಥಳೀಯ ಇತಿಹಾಸ ಕೃತಿ. ವೆಂಕಪ್ಪಯ್ಯ ಖ್ಯಾತ ಶಿಶು ಸಾಹಿತಿಯೂ ಆಗಿದ್ದರು. ಅವರ ಬರಹಗಳಲ್ಲಿ ಕಾಲಂಶ ಮಾತ್ರ ಈಗ ಲಭ್ಯವಿದೆ. ಅವರ ಲಭ್ಯ ಕೃತಿ | ಗಳನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಂಸ್ಕರಣ ಸಮಿತಿ ಪ್ರಕಟಿಸಿದೆ. (ಸಂಪಾದಕರು ರಾಧಾಕೃಷ್ಣ ಉಳಿಯತ್ತಡ್ಕ).

About the Author

ರಾಧಾಕೃಷ್ಣ ಕೆ. ಉಳಿಯತ್ತಡ್ಕ

ರಾಧಾಕೃಷ್ಣ ಕೆ. ಉಳಿಯತ್ತಡ್ಕ (ಜನನ 1958) ಕಾಸರಗೋಡಿನ 'ತುಳುನಾಡು ಟೈಮ್' ದೈನಿಕದ ಸುದ್ದಿ ಸಂಪಾದಕರು. ಅವರು ಸಾಹಿತ್ಯ ರಚನೆ, ಸಂಘಟನಾ ಕಾರ್ಯದಲ್ಲಿ ಸಕ್ರಿಯರಾಗಿರು ವವರು. ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಕನ್ನಡ ಲೇಖಕರ ಸಂಘದ ಕಾರ್ಯದರ್ಶಿಯಾಗಿ, ಹಲವು ಸಾಂಸ್ಕೃತಿಕ ಸಂಘಟನೆಗಳ ನಿರ್ದೇಶಕರಾಗಿ, ಸದಸ್ಯರಾಗಿರುವ ರಾಧಾಕೃಷ್ಣ ಉಳಿಯತ್ತಡ್ಕರ ಪ್ರಕಟಿತ ಕೃತಿಗಳು: ಸರಳ ಗೀತೆಗಳು, ಈ ನನ್ನ ಶಬ್ದಗಳು, ನೋವ ಜಿನುಗುವ ಜೀವ, ಬೆಂಕಿ ನುಂಗುವ ಹುಡುಗ, ಹದಿಯರೆಯದ ಹನಿಗಳು, ಮತ್ತು ಅರ್ಧ ಸತ್ಯದ ಬೆಳಕು (ಕವನ ಸಂಕಲನಗಳು); ಕುತ್ಯಾಳ ಸಂಪದ, ನೆಲದ ಧ್ಯಾನ, ಮಧೂರು, ಕಯ್ಯಾರ, ಕಯ್ಯಾರ ...

READ MORE

Related Books