ಡಿ.ಕೆ. ಚೌಟ

Author : ವಾಮನ ನಂದಾವರ

Pages 48

₹ 33.00




Year of Publication: 2007
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

  ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 14ನೇ ಪುಸ್ತಕ. ತುಳು ಸಾಹಿತ್ಯ ಕ್ಷೇತ್ರದಲ್ಲಿ 'ಗಡಿಹಿಡಿದ' ಗುತ್ತಿನಾರ್‌ರ ಹಾಗೆ ಶೋಭಿಸುವ ದರ್ಬೆ ಕೃಷ್ಣಾನಂದ ಚೌಟರು ಕಾಸರಗೋಡಿನವರು. ಮೂಲತಃ ಕೃಷಿ ಕುಟುಂಬದಿಂದ ಬಂದ ಚೌಟರಿಗೆ ಕೃಷಿಯೂ ಸೇರಿದಂತೆ ಇರುವ ಆಸಕ್ತಿಗಳು ಹಲವು. ಅವರ ಕಾರ್ಯಕ್ಷೇತ್ರದ ವ್ಯಾಪ್ತಿಯೂ ಗುತ್ತಿನಮನೆಯ ಬಾಕಿಮಾರು ಗದ್ದೆಯ ಹಾಗೆ ವಿಶಾಲ ಮತ್ತು ಬೆಳೆಯಲ್ಲಿ ಸಮೃದ್ದ. ಬಿಡುವಿಲ್ಲದ ಒತ್ತಡದ ನಡುವೆಯೂ ಅವರು ಜತನದಿಂದ ಕಾದಿರಿಸಿಕೊಂಡು ಬಂದಿರುವ ಸಾಹಿತ್ಯ ಸಂಸ್ಕೃತಿ ಪ್ರೀತಿ, ಚಿತ್ರಕಲೆ ಮತ್ತು ರಂಗಭೂಮಿಯ ವ್ಯಾಮೋಹ ಅವರ ಸೃಜನಶೀಲತೆಗೆ ಕೋಡುಮೂಡಿಸಿತು. ಅದರಿಂದ  ತುಳು ಭಾಷೆಗೆ ಲಾಭವಾಯಿತು. ತುಳುಭಾಷೆಯ ಸೊಬಗು ಸೊಗಡನ್ನು ನೋಡಬೇಕಾದರೆ, ಅದರ ಅಂತಃಸತ್ವವನ್ನು ಕೊಡು ಕುಡಿಯಬೇಕಾದರೆ ಚೌಟರ ಬರೆಹಗಳ ಒಳಹೊಗಬೇಕು. ಅದು ಮಹಾಕವಿ ರನ್ನನ ಚಂಪೂ ಕಾವ್ಯದ ಹಾಗೆ ಅದ್ಭುತ ಮತ್ತು ರಮ್ಯ ಲೋಕಕ್ಕೆ ಓದುಗನನ್ನು ಕರೆದೊಯ್ದು ಅಲ್ಲಿ ಅವನನ್ನು ಬಿಡುಗಣ್ಣಿನವನನ್ನಾಗಿ ಮಾಡುತ್ತದೆ. ಚೌಟರನ್ನು ಕುರಿತ ಪುಸ್ತಕವಿದು. 

About the Author

ವಾಮನ ನಂದಾವರ
(15 November 1944)

ಕನ್ನಡ ಮತ್ತು ತುಳು ಭಾಷೆಯ ವಿದ್ವಾಂಸರಾಗಿರುವ ವಾಮನ ನಂದಾವರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ನಂದಾವರ ಗ್ರಾಮದವರು. ಮಂಗಳೂರು ಸಂತ ಅಲೋಶಿಯಸ್ ಕಾಲೇಜು ಬಿ.ಎಸ್‌ಸಿ ಪದವಿ ಪಡೆದ ಅವರು ಮಂಗಳೂರು ಸರಕಾರಿ ಮಹಾವಿದ್ಯಾಲಯದಲ್ಲಿ ಬಿ.ಇಡಿ ಪದವಿ ಪೂರ್ಣಗೊಳಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಎಂ.ಎ (ಕನ್ನಡ) ಪದವೀಧರರಾದ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎ.ವಿವೇಕ ರೈಯವರ ಮಾರ್ಗದರ್ಶನದಲ್ಲಿ 'ಕೋಟಿ ಚೆನ್ನಯ ಜಾನಪದೀಯ ಅಧ್ಯಯನ’ ಮಹಾ ಪ್ರಬಂಧಕ್ಕೆ ಪಿಎಚ್.ಡಿ ಪದವಿ ಗಳಿಸಿದರು. ಬೆಂಗಳೂರುದ ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ಸಹಾಯಕ ಅಧ್ಯಾಪಕರಾಗಿ ಶಿಕ್ಷಣ ವೃತ್ತಿ ಜೀವನ ಆರಂಭಿಸಿದ ಅವರು ಸೇಂಟ್ ...

READ MORE

Related Books