ಕೋಟಿಮೂಲೆ ಗುಣವಂತೇಶ್ವರ ಭಟ್‌

Author : ಶ್ರೀವತ್ಸ ಎಸ್. ವಟಿ

Pages 56

₹ 45.00




Year of Publication: 2019
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟಿಸಿರುವ 287ನೇ ಕೃತಿ ’ಕೋಟಿಮೂಲೆ ಗುಣವಂತೇಶ್ವರ ಭಟ್‌’. ಕಾರ್ಕಳದಲ್ಲಿರುವ ಕೆನರಾ ಬ್ಯಾಂಕಿನ ಸಿ. ಇ. ಕಾಮತ್ ಕರಕುಶಲ ತರಬೇತಿ ಶಾಲೆಯ ಮೊತ್ತ ಮೊದಲ ಮತ್ತು ಏಕೈಕ ಕಲಾಗುರು. ನೂರಾರು ಶಿಲ್ಪಿಗಳಿಗೆ ಗುರುವಾಗಿರುವ ಕೋಟಿಮೂಲೆ ಗುಣವಂತೇಶ್ವರ ಭಟ್ ಇಂದು `ಮಾಸ್ಟರ್ ಕ್ರಾಫ್ಟ್ ಮನ್' ಎಂಬ ಹುದ್ದೆಯಲ್ಲಿ ಮುಖ್ಯ ಶಿಲ್ಪಕಲಾ ಗುರುವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋಟಿಮೂಲೆ ಗುಣವಂತೇಶ್ವರ ಭಟ್ ಅವರು ಖ್ಯಾತ ಶಿಲ್ಪಿ. ಪುತ್ತೂರು ಸಮೀಪದ ಹನುಮಗಿರಿ ಕ್ಷೇತ್ರದ ಪಂಚಮುಖಿ ಆಂಜನೇಯ, 18 ಅಡಿ ಎತ್ತರದ ಕೋದಂಡರಾಮ ವಿಗ್ರಹ ಸೇರಿದಂತೆ ಹಲವಾರು ಪ್ರಸಿದ್ದ ಶಿಲ್ಪಕೃತಿಗಳನ್ನು ರಚಿಸಿದ್ದಾರೆ. 'ವಾದಿರಾಜ ಶೈಲಿ'ಯ ಮುಖ್ಯ ಶಿಲ್ಪಿ. ಮೊದಲು ಸಮಾಜಸೇವಕರಾಗಿ, ಮರದ ಕೆಲಸದಲ್ಲಿ ನುರಿತರಾದ ಅವರು ಜೋಗರದೊಡ್ಡಿ ಶಾಲೆಯ ಸಹಾಯಕ ಶಿಲ್ಪಿಯಾಗಿ ಉದ್ಯೋಗಿಯಾಗಿದ್ದಾರೆ.

About the Author

ಶ್ರೀವತ್ಸ ಎಸ್. ವಟಿ

ಲೇಖಕ, ಸಂಶೋಧಕ ಶ್ರೀವತ್ಸ ಎಸ್. ವಟಿ ಅವರು ಕನ್ನಡದಲ್ಲಿ ಸ್ನಾತಕೋತ್ತರ ಮತ್ತು ಭಾರತೀಯ ವಾಯದಲ್ಲಿ ಕಾಲಗಣನೆ' ಎಂಬ ವಿಷಯದಲ್ಲಿ ಡಾಕ್ಟರೇಟ್ ಅಧ್ಯಯನ ನಡೆಸಿದ್ದಾರೆ. ಕನ್ನಡ ಪ್ರಾಧ್ಯಾಪಕರಾದ ಅವರು ಕರ್ನಾಟಕದ ಮೂರ್ತಿಶಿಲ್ಪಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಇದುವರೆಗೆ ಹದಿನೈದು ಕೃತಿಗಳನ್ನು ಪ್ರಕಟಿಸಿರುವ ಶ್ರೀವತ್ಸ ವಟಿಯವರು ಬೇಲೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು. 'ಭಾರತೀಯ ಕಾಲಗಣನೆ ವಿಜ್ಞಾನ', 'ವಿಷ್ಣು ಚತುರ್ವಿಂಶತಿ ಮೂರ್ತಿಗಳಲ್ಲಿ ಗಣಿತ ಮತ್ತು ಅಧ್ಯಾತ್ಮ ರಹಸ್ಯ', 'ಹಲ್ಮಡಿ ಶಾಸನ ಒಂದು ಪರಿಚಯ' ಇತ್ಯಾದಿ ಅವರ ಮಹತ್ವದ ಕೃತಿಗಳು. ...

READ MORE

Related Books