ಕೂಡ್ಲು ಗೋಪಾಲಕೃಷ್ಣ ಶ್ಯಾನುಭಾಗ

Author : ರಾಧಾಕೃಷ್ಣ ಕೆ. ಉಳಿಯತ್ತಡ್ಕ

Pages 56

₹ 45.00




Year of Publication: 2019
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟಿಸಿರುವ 286ನೇ ಕೃತಿ ’ಕೂಡ್ಲು ಗೋಪಾಲಕೃಷ್ಣ ಶ್ಯಾನುಭಾಗ’. ಅವರ ಮನೆತನ ನಾಡಿನ ಭವ್ಯ ಇತಿಹಾಸ ಉಳ್ಳ ಮನೆತನಗಳಲ್ಲಿ ಒಂದು. ಅಭಿಜಾತ ಕಲಾವಿದರಾದ ಅವರು ಸಂಗೀತ, ನಾಟಕ, ಚಿತ್ರಕಲೆ, ಯಕ್ಷಗಾನ ಹೀಗೆ ಹತ್ತು ಹಲವು ಕಲಾಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರು ತಮ್ಮ ಸ್ವಂತ ಪರಿಶ್ರಮದಿಂದ ಶಿಲ್ಪಕಲೆ, ರಂಗಸಜ್ಜಿಕೆ, ಹಾರ್ಮೋನಿಯಂ ಮುಂತಾದ ಕಲಾಪ್ರಭೇದಗಳಲ್ಲಿ ಪಾಂಡಿತ್ಯ ಸಾಧಿಸಿದವರು. ಆಯಸ್ಕಾಂತ ಚಿಕಿತ್ಸಾ ವಿಧಾನ, ಏಕಮೂಲಿಕೆ ಔಷಧಿ, ಧ್ಯಾನ ಮೊದಲಾದ ವಿಷಯಗಳಲ್ಲಿ ಪ್ರಚಾರವನ್ನು ಬಯಸದೆ ತಮ್ಮನ್ನು ತಾವು ತೊಡಗಿಸಿಕೊಂಡ ವಿಶೇಷ ಸಂಗತಿಗಳು ಈ ಕೃತಿಯಲ್ಲಿ ಅಡಕವಾಗಿವೆ.

About the Author

ರಾಧಾಕೃಷ್ಣ ಕೆ. ಉಳಿಯತ್ತಡ್ಕ

ರಾಧಾಕೃಷ್ಣ ಕೆ. ಉಳಿಯತ್ತಡ್ಕ (ಜನನ 1958) ಕಾಸರಗೋಡಿನ 'ತುಳುನಾಡು ಟೈಮ್' ದೈನಿಕದ ಸುದ್ದಿ ಸಂಪಾದಕರು. ಅವರು ಸಾಹಿತ್ಯ ರಚನೆ, ಸಂಘಟನಾ ಕಾರ್ಯದಲ್ಲಿ ಸಕ್ರಿಯರಾಗಿರು ವವರು. ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಕನ್ನಡ ಲೇಖಕರ ಸಂಘದ ಕಾರ್ಯದರ್ಶಿಯಾಗಿ, ಹಲವು ಸಾಂಸ್ಕೃತಿಕ ಸಂಘಟನೆಗಳ ನಿರ್ದೇಶಕರಾಗಿ, ಸದಸ್ಯರಾಗಿರುವ ರಾಧಾಕೃಷ್ಣ ಉಳಿಯತ್ತಡ್ಕರ ಪ್ರಕಟಿತ ಕೃತಿಗಳು: ಸರಳ ಗೀತೆಗಳು, ಈ ನನ್ನ ಶಬ್ದಗಳು, ನೋವ ಜಿನುಗುವ ಜೀವ, ಬೆಂಕಿ ನುಂಗುವ ಹುಡುಗ, ಹದಿಯರೆಯದ ಹನಿಗಳು, ಮತ್ತು ಅರ್ಧ ಸತ್ಯದ ಬೆಳಕು (ಕವನ ಸಂಕಲನಗಳು); ಕುತ್ಯಾಳ ಸಂಪದ, ನೆಲದ ಧ್ಯಾನ, ಮಧೂರು, ಕಯ್ಯಾರ, ಕಯ್ಯಾರ ...

READ MORE

Related Books