ಮುಕ್ತಛಂದದ ಕವಿ – ಸುಬ್ರಾಯ ಚೊಕ್ಕಾಡಿ

Author : ದೀಪಾ ಫಡ್ಕೆ

Pages 56

₹ 45.00




Year of Publication: 2017
Published by: ಕನ್ನಡ ಸಂಘ ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟವಾಗಿ ಗುರುತಿಸಲಾಗುವ ಕವಿ ಸುಬ್ರಾಯ ಚೊಕ್ಕಾಡಿ ಅವರು. ತಮ್ಮ ಕವಿತೆಗಳ ಮುಖಾಂತರ ಕನ್ನಡ ಸಾಹಿತ್ಯಾಭಿಮಾನಿಗಳ ಮನದಲ್ಲಿ ಮನೆ ಮಾಡಿದ ಅಪರೂಪದ ಕವಿ ಇವರು. ಇವರ ಪುಸ್ತಕಗಳು ಬಹಳ ಹಿತವಾದ ಕವಿತೆಗಳನ್ನು ಈವರೆಗೆ ಕನ್ನಡದ ಜನತೆಗೆ ನೀಡಿವೆ. ಡಾ. ದೀಪಾ ಫಡ್ಕೆ ಅವರು ಸುಬ್ರಾಯ ಚೊಕ್ಕಾಡಿಯವರ ಬಗ್ಗೆ ಮತ್ತು ಅವರ ಬರಹಗಳ ಕುರಿತಾಗಿ ಉತ್ತಮವಾದ ಪುಸ್ತಕವನ್ನು ಹೊರತಂದಿದ್ದಾರೆ. ಸಾಮಾನ್ಯವಾಗಿ ಕವಿಯ ಮನಸ್ಥಿತಿಯನ್ನು ಹೊಂದಿದ್ದ ಸುಬ್ರಾಯ ಚೊಕ್ಕಾಡಿಯವರಿಗೆ ತರ್ಕದ ಕುರಿತಾಗಿ ಅಷ್ಟು ಇಷ್ಟವಿಲ್ಲದಿದ್ದರೂ, ರಾಜಕೀಯ ತರ್ಕವನ್ನು ಬಹಳಷ್ಟು ಹಿತವಾಗಿ ನಿರೂಪಿಸಿದ ಕಾದಂಬರಿ ‘ಸಂತೆಮನೆ’ಯ ಬಗ್ಗೆ ಬಹಳಷ್ಟು ಸವಿವರವಾಗಿ ವಿವರಿಸಿದ್ದಾರೆ ದೀಪಾ ಫಡ್ಕೆ ಅವರು. ಸಣ್ಣ ಗ್ರಾಮಗಳಲ್ಲಿ ನಡೆಯುವ ರಾಜಕೀಯ ಮತ್ತು ಜಾತಿ ವ್ಯವಸ್ಥೆಯ ಕುರಿತಾದ ಅಸಮಧಾನದ ಕುರಿತು ಸಂತೆಮನೆ ಕಾದಂಬರಿಯಲ್ಲಿ ಯಾವ ರೀತಿ ಬಣ್ಣಿಸಲಾಗಿದೆ ಎಂಬುದರ ಕುರಿತು ಸುಂದವಾದ ವಿವರಣೆಯನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. ಜೊತೆಗೇ, ಸುಬ್ರಾಯ ಚೊಕ್ಕಾಡಿಯವರ ಕವನಗಳ ಕುರಿತಾಗಿ ವಿಸ್ತೃತವಾದ ವಿಶ್ಲೇಷನಾತ್ಮಕ ಬರಹಗಳನ್ನು ಈ ಪುಸ್ತಕದಲ್ಲಿ ನಮೂದಿಸಲಾಗಿದೆ.

About the Author

ದೀಪಾ ಫಡ್ಕೆ

ಬೆಂಗಳೂರಿನಲ್ಲಿ ನೆಲೆಸಿರುವ ಡಾ. ದೀಪಾ ಫಡ್ಕೆ ಅವರು ಮೂಲತಃ ದಕ್ಷಿಣಕನ್ನಡದ ಬೆಳ್ತಂಗಡಿಯವರು. ಉಜಿರೆಯಲ್ಲಿ ಪದವಿ ಪಡೆದು, ಕನ್ನಡ ಎಂ.ಎ. ಪದವಿಯನ್ನು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ. 'ಪುರಂದರ ಕನಕರ ಕೀರ್ತನೆ ಗಳಲ್ಲಿ ಅಭಿವ್ಯಕ್ತಿ : ಮನೋವೈಜ್ಞಾನಿಕ ಅಧ್ಯಯನ' ಎನ್ನುವ ವಿಷಯದಲ್ಲಿ ಅಧ್ಯಯನ ನಡೆಸಿರುವ ದೀಪಾ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿ ದೊರೆತಿದೆ. ದೀಪಾ ಫಡ್ಡೆಯವರು, ಸಂಸ್ಕೃತಿ ಕುರಿತ ಬರಹಗಳ ಗುಚ್ಛವಾದ 'ಋತ', ’ಹರಪನಹಳ್ಳಿ ಭೀಮವ್ವ', 'ಡಾ. ಪ್ರದೀಪಕುಮಾರ್ ಹೆಬ್ರಿ-ಮಹಾಕಾವ್ಯಗಳ ಕವಿ' ಹಾಗೂ ’ಲೋಕಸಂವಾದಿ' (ಮೊಗಸಾಲೆಯವರ ಬದುಕು ಬರಹಗಳ ಕುರಿತು), ನಾಡಿಗೆ ನಮಸ್ಕಾರ ಮಾಲೆಗಾಗಿ ಈ ಕೃತಿಯಲ್ಲದೆ ...

READ MORE

Related Books