
ಮಹಾಯುದ್ದಕ್ಕೆ ಮುನ್ನ’ ಎಂಬ ಪುಸ್ತಕದ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಲಕ್ಷ್ಮೀಶ ತೋಳ್ಪಾಡಿ ಅವರ ’ಬೆಟ್ಟ ಮಹಮ್ಮದನ ಬಳಿಗೆ ಬಾರದಿದ್ದರೆ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ತಮ್ಮ ಬರವಣಿಗೆ ಮಾತು ಉಪನ್ಯಾಸಗಳ ಮೂಲಕ ನಾಡಿನಾದ್ಯಂತ ಪರಿಚಿತ ಇರುವ ತೋಳ್ಪಾಡಿ ಅವರು ಮಹಾಭಾರತ-ರಾಮಾಯಣ ಸೇರಿದಂತೆ ಹಲವು ಕಾವ್ಯಗ್ರಂಥಗಳನ್ನು ಸೊಗಸಾಗಿ ವಿವರಿಸಬಲ್ಲವರು. ತೋಳ್ಪಾಡಿ ಅವರ ಬದುಕು-ಬರಹವನ್ನು ಪರಿಚಯಿಸುವ ಕೃತಿಯಿದು. ಕಾಂತಾವರದ ಕನ್ನಡ ಸಂಘವು ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯಲ್ಲಿ ಪ್ರಕಟವಾದ 117ನೇ ಪುಸ್ತಕವಿದು.
©2025 Book Brahma Private Limited.