
‘ಜ್ಞಾನಸಿಂಧು’ ಮಲ್ಲೇಪುರಂ ಜಿ. ವೆಂಕಟೇಶ ಅವತರ ಸಂಪಾದಿತ ಕೃತಿಯಾಗಿದೆ. ಈ ಕೃತಿಯು ಚಿದಾನಂದಾವಧೂತರ ವೇದಾಂತ ಕಾವ್ಯವಾಗಿದೆ. ಕನ್ನಡ ಸಾಹಿತ್ಯ ಪರಂಪರೆ ನಮ್ಮ ಮುಂದೆ ಸಮೃದ್ಧವಾಗಿ ಕಾಣುತ್ತಿದೆ ಎಂದರೆ, ಅದಕ್ಕೆ ಕಾರಣರಾದವರು ಕಳೆದ ಶತಮಾನದಲ್ಲಿ ಕನ್ನಡ ಕಂಡ ಪಂಡಿತ ಪಡೆ, ಹಳೆ ಕಾವ್ಯಗಳನ್ನು ಪತ್ತೆ ಮಾಡಿ ಪರಿಷ್ಕರಿಸಿ ಅದರ ಮಹತ್ವವನ್ನು ವಿವರಿಸಿ ಜನ ಸಾಮಾನ್ಯರಿಗೆ ದಕ್ಕುವಂತೆ ಮಾಡಿದ ಹೆಗ್ಗಳಿಕೆ ಇವರದು. ಇನ್ನು ಭಾಮಿನಿ ಷಟ್ಪದಿಯಲ್ಲಿರುವ ‘ಜ್ಞಾನಸಿಂಧು’ ನಿಜಕ್ಕೂ ಜ್ಞಾನದ ಸಿಂಧೂವೇ ಸರಿ. ಪೀಠಿಕಾ ಪ್ರಕರಣವೂ ಸೇರಿದಂತೆ ಒಟ್ಟು ನಲವತ್ತೊಂಬತ್ತು ಪ್ರಕರಣಗಳಿದ್ದು ಒಟ್ಟು ಪದ್ಯಗಳ ಸಂಖ್ಯೆ ಮೂರುಸಾವಿರ ಆರುನೂರು. ಅದ್ವೈತಕ್ಕೆ ಸಂಬಂಧಿಸಿದ ಯಾವ ವಿಷಯವೂ ಬಿಟ್ಟು ಹೋಗದಂತೆ ಚಿದಾನಂದಾವಧೂತರು ತೋರಿಸಿರುವ ಕಾಳಜಿ ಗಮನಾರ್ಹವಾಗಿದೆ.
©2025 Book Brahma Private Limited.