
`ಅವತಾರ್ ಮತ್ತು ಹಾರುವ ಕುದುರೆ’ ಕೃತಿಯು ನಾಗರಾಜ ಎಂ.ಹುಡೇದ ಅವರ ಮಕ್ಕಳ ಕಥಾ ಸಂಕಲನವಾಗಿದೆ. ಮಕ್ಕಳ ಮನೋಜ್ಞಾನವನ್ನು ಗ್ರಹಿಸಿಕೊಂಡು ಈ ಕೃತಿಯು ರಚಿತವಾಗಿದ್ದು, ಇಲ್ಲಿ ಸಾಮಾನ್ಯ ಕತೆಗಳು ಕೂಡ ಅಡಕವಾಗಿವೆ. ಕುವೆಂಪು ಅವರ ಬೊಮ್ಮನಹಳ್ಳಿಯ ಕಿಂದರಿಜೋಗಿಯನ್ನು ನೆನಪಿಸಿಕೊಳ್ಳುವ ಮೂಲಕ ಈ ಕೃತಿಯ ಕಥಾಹಂದರವು ಪ್ರಾರಂಭಗೊಳ್ಳುತ್ತದೆ. ಅಜ್ಜನ ಪಾತ್ರದ ಮೂಲಕ ಲೇಖಕರು ಇಲ್ಲಿ ಕತೆಗಳನ್ನು ನಿರೂಪಿಸುತ್ತಾ ಹೋಗುತ್ತಾರೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪರಿಸರ ಕಾಳಜಿಯನ್ನು ಇಲ್ಲಿ ಬಿಂಬಿಸಿದ್ದಾರೆ. ಕೃತಿಗೆ ಬೆನ್ನುಡಿ ಬರೆದಿರುವ ತಮ್ಮಣ್ಣ ಬೀಗಾರ ಅವರು, ಮಕ್ಕಳ ಸುತ್ತಲಿನ ಸಂಗತಿಯನ್ನೇ ಉತ್ತರ ಕರ್ನಾಟಕದ ಆಡು ಭಾಷೆಯ ಸೊಗಡಿನೊಂದಿಗೆ ಇಡಲು ಪ್ರಯತ್ನಿಸಿದ್ದಾರೆ. ಮಕ್ಕಳಿಗೆ ಆಪ್ತವಾಗುವಂತಿದೆ. ಅವತಾರ್ ಮತ್ತು ಹಾರುವ ಕುದುರೆ, ಕಪ್ಪೆಗಳ ಮದುವೆ, ಮಾತಾಡುವ ಮರ ಮುಂತಾದ ಕಥೆಗಳು ಮಕ್ಕಳಿಗೆ ಇಷ್ಟವಾಗುವುದರಲ್ಲಿ ಸಂದೇಶವಿಲ್ಲ.ಅಜ್ಜ ಮಕ್ಕಳೊಂದಿಗೆ ಪ್ರೀತಿಯಿಂದ ಮಾತಿಗಿಳಿದಿದ್ದಾರೆ. ಅವನು ಮರ, ಕಪ್ಪೆ, ಕಾಡು ಪ್ರಾಣಿಗಳು, ಕನಸಿನ ಲೋಕ, ಹಸಿರುಗುಡ್ಡ ಎಲ್ಲ ತಂದಿಟ್ಟಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.