ವೆಂಕಟೇಶ ತಿರಕೋ ಕುಲಕರಣಿ (ಗಳಗನಾಥ) ಹಾಗೂ ರಾಮಚಂದ್ರ ಕೃಷ್ಣ ದೇಶಪಾಂಡೆ, ಲಕ್ಷ್ಮೇಶ್ವರ ಅವರು ಬರೆದ ಕೃತಿ ಕುರುಕ್ಷೇತ್ರ. ಉತ್ತಮ ಆಡಳಿತಕ್ಕಾಗಿ ಮಹಾಭಾರತದಲ್ಲಿ ಕುರುಕ್ಷೇತ್ರ ನಡೆಯಿತು ಎಂಬುದು ನಂಬಿಕೆ. ಅನ್ಯಾಯಕ್ಕೆ ಹಾಗೂ ಗರ್ವಕ್ಕೆ ತನ್ನದೇ ಆದ ಒಂದು ಮಿತಿ ಹಾಗೂ ಕೊನೆ ಇದೆ ಎಂಬುದಕ್ಕೂ ಈ ಮಹಾಭಾರತದ ಕುರುಕ್ಷೇತ್ರ ಸಂದೇಶ ನೀಡುತ್ತದೆ. ಅದರಂತೆ, ಮೊಗಲ್ ಸಾಮ್ರಾಜ್ಯ, ಹಿಂದೂಗಳನ್ನು ಸದೆ ಬಡಿಯುವ ಅವರ ಅಟ್ಟಹಾಸ, ಶಿವಾಜಿಯ ಪ್ರತಿಕ್ರಿಯೆ, ಬಾಹುಸಾಹೇಬನ ದುರಾಡಳಿತ ಹಾಗೂ ದುರಾಶೆಯ ಪರಾಕಾಷ್ಟೆ ಎಲ್ಲವೂ ಕಾದಂಬರಿಯ ವಸ್ತುವಾಗಿವೆ.
ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...
READ MORE