ಮಾರಿಯ ಕಲ್ಲು ಮತ್ತು ಇತರ ಕಥೆಗಳು

Author : ಕೆ.ಎಸ್. ನರಸಿಂಹಸ್ವಾಮಿ

Pages 36

₹ 50.00




Year of Publication: 1942
Published by: ಕೆ. ಎಸ್. ನರಸಿಂಹಸ್ವಾಮಿ ಟ್ರಸ್ಟ್,
Address: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆವರಣ , ನಾಲ್ವಡಿ ಕೃಷ್ಣರಾಜ ಒಡೆಯರ್‍ ಕಲಾ ಭವನ್ ಮಂಡ್ಯ
Phone: 9916796832

Synopsys

ಕವಿ ಕೆ.ಎಸ್. ನರಸಿಂಹಸ್ವಾಮಿಯವರ ಕಥೆಗಳು ಮಕ್ಕಳ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವಂತ ನೀತಿಕತೆಗಳು.

ಮಾರಿಯ ಕಲ್ಲು, ದೆವ್ವದ ಮನೆ, ಪುಟ್ಟ ಹೂವಿನ ಪುಣ್ಯ, ಶಾನುಭೋಗರ ಹೈದ, ಮಧುಗಿರಿಯ ಮೂರ್ತಿ, ಸಮುದ್ರ ರಾಣಿ, ನಮ್ಮಿಸ್ಕೂಲು ಕತೆಗಳನ್ನು ಸಂಗ್ರಹಿಸಿರುವ ಪುಸ್ತಕವೇ ’ಮಾರಿಯ ಕಲ್ಲು’.  ಈ ಕೃತಿಯು ಮೊದಲು ವಯುಸ್ಕರ ಶಿಕ್ಷಣ ಸಮಿತಿ, ಮೈಸೂರಿನಲ್ಲಿ 1942 ರಲ್ಲಿ ಪ್ರಕಟವಾಗಿತ್ತು. ಇದೀಗ ಕೆ.ಎಸ್.ನ ಶಿಶು ಸಾಹಿತ್ಯ ಟ್ರಸ್ಟ್ ಮೂಲಕ ಹೊರಬರುತ್ತಿದೆ.

ಸಣ್ಣ ಸಣ್ಣ ವಿಷಯಗಳನ್ನು ಇಟ್ಟುಕೊಂಡು ಮಕ್ಕಳ ಬುದ್ದಿಶಕ್ತಿಗೆ ಮತ್ತಷ್ಟು ನೈತಿಕತೆಯನ್ನು ಬೀರುವ ಚಂದದ ಕತೆಗಳನ್ನು ಈ ಪುಸ್ತಕದಲ್ಲಿ ಪ್ರಕಟಿಸಲಾಗಿದೆ.

ಕತೆಗಳಿಗೆ ಪೂರಕವಾಗಿ ಅಂದದ, ವರ್ಣರಂಜಿತ ಚಿತ್ರಗಳು ಮಕ್ಕಳನ್ನು ಆಕರ್ಷಿಸುತ್ತಾ ಕತೆಯನ್ನು ಇನ್ನೂ ಸೊಗಸಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ.

 

About the Author

ಕೆ.ಎಸ್. ನರಸಿಂಹಸ್ವಾಮಿ
(26 January 1915 - 28 December 2003)

ಮೈಸೂರ ಮಲ್ಲಿಗೆಯ ಕವಿಯೆಂದು ಪ್ರಖ್ಯಾತರಾಗಿ ಮನೆಮಾತಾದ ಕೆ.ಎಸ್. ನರಸಿಂಹಸ್ವಾಮಿ ಅವರು (ಕಿಕ್ಕೇರಿ ಸುಬ್ಬರಾಯ ನರಸಿಂಹಸ್ವಾಮಿ) ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ 1915ರ ಜನೆವರಿ 26ರಂದು ಜನಿಸಿದರು. ತಂದೆ ಸುಬ್ಬರಾಯ, ತಾಯಿ ನಾಗಮ್ಮ. ಮೈಸೂರಿನ ಮಹಾರಾಜ ಹೈಸ್ಕೂಲು, ಇಂಟರ್ ಮೀಡಿಯೇಟ್ ಕಾಲೇಜ್ ಮತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜುಗಳಲ್ಲಿ ಓದಿದ ಅವರು ಆರ್ಥಿಕ ತೊಂದರೆಗಳಿಂದ ಡಿಗ್ರಿ ವ್ಯಾಸಂಗವನ್ನು ಪೂರ್ಣ ಮಾಡಲಾಗಲಿಲ್ಲ. 22ನೇ ವಯಸ್ಸಿನಲ್ಲಿ ಗುಮಾಸ್ತೆ ಹುದ್ದೆಗೆ ಸೇರಿದ್ದರು. ಆ ವೇಳೆಗೆ ತಿಪಟೂರಿನ ವೆಂಕಮ್ಮನವರೊಂದಿಗೆ ವಿವಾಹವಾಗಿತ್ತು. ತಮ್ಮ ವೃತ್ತಿಜೀವನದ ಕಾಲದಲ್ಲಿ ಮೈಸೂರು, ನಂಜನಗೂಡು, ಬೆಂಗಳೂರುಗಳಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ ಸರಕಾರಿ ನೌಕರರಾಗಿ ದುಡಿದು ...

READ MORE

Related Books