
ಲೇಖಕ ವೀರೇಂದ್ರ ರಾವಿಹಾಳ್ ಅವರ ಮಕ್ಕಳ ಸಾಹಿತ್ಯ ಕೃತಿ `ಈ ಕಾಲದ ಹುಡುಗʼ. ನಾರಂಶೆಟ್ಟಿ ಉಮಾಮಹೇಶ್ವರರಾವ್ ಅವರು ಮೂಲ ಕೃತಿಯ ಕತೃ. ರವಿ ಎನ್ನುವ ತೀಕ್ಷ್ಣಮತಿಯುಳ್ಳ ಚತುರ ಹುಡುಗನ ಸಾಹಸಗಳನ್ನು ಅರ್ಥವತ್ತಾಗಿ ನಿರೂಪಿಸುವ ಕಾದಂಬರಿ. ಸಾದಾ ಹುಡುಗನಂತೆ ತೋರಿದರೂ ಸ್ನೇಹಮಯ ವ್ಯಕ್ತಿತ್ವವನ್ನು ಹೊಂದಿರುತ್ತಾನೆ. ಈಜು ಬಾರದ ಹುಡುಗನೊಬ್ಬನನ್ನು ಬದುಕುಸುವುದು, ಅಜ್ಜಿಯ ಕೊರಳ ಸರ ಕದಿಯುವುದು, ಮಕ್ಕಳನ್ನು ಅಪಹರಿಸಿದಾಗ ಆತ ಪರಾರಿಯಾಗಿ ಬರುವುದು, ಮುಂತಾದ ಸಾಹಸ ಕತೆಗಳನ್ನು ಲೇಖಕರು ಕಾದಂಬರಿಯಲ್ಲಿ ಸ್ವಾರಸ್ಯವಾಗಿ ಹೇಳುತ್ತಾರೆ. ಜೊತೆಗೆ ರವಿಗೆ ಅಪ್ಪ, ಅಮ್ಮ, ಅಜ್ಜ-ಅಜ್ಜಿಯೊಂದಿಗಿನ ಸಾಮಿಪ್ಯವನ್ನೂ ಚಿತ್ರಿಸುತ್ತಾರೆ.
©2025 Book Brahma Private Limited.