
ಲೇಖಕ ’ಸಂಪಟೂರು ವಿಶ್ವನಾಥ್’ ಅವರ ‘ಹುಲಿಯನ್ನು ತಿಂದ ಕಪ್ಪೆ' ಕೃತಿಯು ಮಕ್ಕಳ ಸಣ್ಣ ಕತೆಗಳ ಸಂಕಲನವಾಗಿದೆ. ಹುಲಿಯನ್ನು ತಿಂದ ಕಪ್ಪೆ ಮತ್ತು ಇಲ್ಲಿನ ಉಳಿದ 21 ಕಥೆಗಳು ಕನ್ನಡದ ದಿನಪತ್ರಿಕೆ ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈ ಎಲ್ಲ ಸಣ್ಣಕಥೆಗಳಲ್ಲಿ ಹಾಸ್ಯಲೇಪನವಿದ್ದರೂ ಇವುಗಳನ್ನು ಸ್ಕೂಲವಾಗಿ ಧಾರ್ಮಿಕ(ತಾತ್ವಿಕ), ವಿಚಾರ ಪ್ರಚೋದಕ, ಬುದ್ಧಿಯ ಬಲ ಮತ್ತು ಶುದ್ಧ ಹಾಸ್ಯದ, ನೆಲೆಗಟ್ಟಿನಲ್ಲಿ ರಚಿಸಲಾಗಿದೆ. ಮಕ್ಕಳಿಗೆ ತಿಳಿಸಿ ಹೇಳಬೇಕಾದ್ದನ್ನು ಗಂಭೀರಶೈಲಿಯಲ್ಲಿ, ಉದ್ದುದ್ದ ವಾಕ್ಯಗಳಲ್ಲಿ ಹೇಳುವುದಕ್ಕಿಂತ ಸರಳವಾದ ಭಾಷೆಯಲ್ಲಿ ದಿನನಿತ್ಯದ ಅನುಭವಗಳನ್ನು ಆಧರಿಸಿ ಹೇಳಿದರೆ ಮಕ್ಕಳಿಗೆ ಬೇಗ ಮನದಟ್ಟಾಗುತ್ತದೆ ಎನ್ನುತ್ತಾರೆ ಲೇಖಕರು.
©2025 Book Brahma Private Limited.