
ಕಡವ ಶಂಭು ಶರ್ಮರು ನವೋದಯ ಕಾಲಘಟ್ಟದ ಹಿರಿಯ ವಿದ್ವಾಂಸರು. ಡಿ.ವಿ. ಗುಂಡಪ್ಪನವರ ’ಮಂಕುತಿಮ್ಮನ ಕಗ್ಗ’ ಕೃತಿಯನ್ನು ಸಂಸ್ಕೃತಕ್ಕೆ ಅನುವಾದಿಸಿದ್ದ ಶಂಭುಶರ್ಮ ಅವರು ನಾಥಪಂಥದ ಪ್ರಮುಖ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ತುಳು ಭಾಷೆ, ಪ್ರಾಚೀನತೆಯನ್ನು ಕುರಿತ ಅವರ ’ತುಳುದೇಶಭಾಷಾ ವಿಚಾರವು’ ಕೃತಿಯನ್ನು 1955ರಲ್ಲಿಯೇ ಪ್ರಕಟಿಸಿದ್ದರು. ಬಿ.ಎಂ. ಶ್ರೀ ಅವರ ಕಾವ್ಯದ ನಿಲುವನ್ನು ಟೀಕಿಸಿದ್ದ ಶಂಭು ಶರ್ಮರು ಕನ್ನಡ ವಿದ್ವಾಂಸ ಪರಂಪರೆಯಲ್ಲಿ ಪ್ರಮುಖ ವ್ಯಕ್ತಿ. ಅವರ ಬದುಕು-ಬರಹವನ್ನು ಕುರಿತ ಈ ಪುಸ್ತಕವನ್ನು ಎಚ್.ಜಿ. ಶ್ರೀಧರ್ ಅವರು ರಚಿಸಿದ್ದಾರೆ.
©2025 Book Brahma Private Limited.