ಅಕ್ಕೂರಮಠರ ಸಮಗ್ರ ಸಾಹಿತ್ಯ ಸಂಪುಟ - ೩

Author : ಷಣ್ಮುಖಯ್ಯ ಅಕ್ಕೂರಮಠ

Pages 504

₹ 500.00




Year of Publication: 2020
Published by: ಅನುಪಮ ಪ್ರಕಾಶನ
Address: ಅಥಣಿ, ಸಾವಿತ್ರಿ ಸಾಧನ್, ಸತ್ಯಪ್ರಮೋದ್ ನಗರ, ಬೆಳಗಾವಿ ಜಿಲ್ಲೆ, ಅಥಣಿ - 591304
Phone: 9449625025

Synopsys

ಸಂಸ್ಕೃತ ಸಾಹಿತ್ಯ, ಕಾವ್ಯ, ಚಂಪೂಕಾವ್ಯ, ನಾಟಕಗಳು, ಛಂದಸ್ಸು, ವ್ಯಾಕರಣ ಮೊದಲಾದ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದ ಷಣ್ಮುಗಯ್ಯ ಅಕ್ಕೂರಮಠ ಅವರ ಲೇಖನಗಳ ಸಂಗ್ರಹ ಇದಾಗಿದೆ. “'ಪರಮಾನುಭವ ಬೋಧೆ'ಯ ತತ್ವದರ್ಶನ ಹಾಗೂ ಬೋಧನಾ ವೈಖರಿ, 'ಪರಮಾನುಭವ ಬೋಧೆ'ಯಲ್ಲಿ ಯಾಜ್ಞವಲ್ಕರ ಶೃಂಗಾರಮಯ ಸಂಬೋಧನೆಗಳು, ಕೈವಲ್ಯಪದ್ಧತಿಯಲ್ಲಿ ನಾಮಾವಳಿಗಳ ವೈಭವ ಹಾಗೂ ತಾತ್ವಿಕ ಮೌಲ್ಯ, ಕೈವಲ್ಯಸಾಹಿತ್ಯದಲ್ಲಿ ನಿಜಗುಣರ ನಿಲುವು, ಕೈವಲ್ಯ ದರ್ಪಣ: ಒಂದು ಅವಲೋಕನ, ಪ್ರಸ್ತಾವನೆ : `ಶರೀರವೆಂಬ ಹೋಲಿ, ಅನುಭಾವಿ ಕವಿಯಾಗಿ ಮುಪ್ಪಿನ ಷಡಕ್ಷರಿ, ಮರುಳಸಿದ್ಧನ ಕಂತೆಯಲ್ಲಿ ಜೀವನ ಸೌಂದರ್ಯ, ಶಿಶುವಿನಾಳ ಶರೀಫರ ಅನುಭಾವ ಸಾಹಿತ್ಯ, ಲಲ್ಲೇಶ್ವರಿ, ಅರೇಬಿಯಾದ ವಿರಾಗಿಣಿ: ರಾಬಿಯಾ ಜೀವನ ಮತ್ತು ಸಂದೇಶ, ಮತಿಗೆ ಮಂಗಳವಾವುದು? – ಉತ್ತಮಸಂಗ, ಸತ್ತು ಬದುಕಬೇಕು, ಹಣ, ಸುಖ, ಮನೋಭಾವ, ಮೋಹ” ಮುಂತಾದ ಬರಹಗಳು ಇಲ್ಲಿವೆ.

About the Author

ಷಣ್ಮುಖಯ್ಯ ಅಕ್ಕೂರಮಠ

ಷಣ್ಮುಗಯ್ಯ ಅಕ್ಕೂರಮಠ ಅವರು ಗದಗ ಜಿಲ್ಲೆ, ಶಿರಹಟ್ಟಿ ತಾಲ್ಲೂಕು, ಬೂದಿಹಾಳ ಗ್ರಾಮದಲ್ಲಿ 1939 ಆಗಸ್ಟ್‌ 23ರಂದು ಜನಿಸಿದರು. ತಂದೆ ವೀರಪ್ಪಯ್ಯ ಶಾಸ್ತ್ರಿ ಅಕ್ಕೂರಮಠ, ತಾಯಿ ಬಸವಲಿಂಗಾಂಬೆ. ಸಂಸ್ಕೃತದಲ್ಲಿ ಅಪಾರ ಆಸಕ್ತಿ ತಳೆದಿದ್ದರು. ಸಂಸ್ಕೃತ ಸಾಹಿತ್ಯ, ಕಾವ್ಯ, ಚಂಪೂಕಾವ್ಯ, ನಾಟಕಗಳು, ಛಂದಸ್ಸು, ವ್ಯಾಕರಣ, ತರ್ಕ ಮೊದಲಾದ ವಿಷಯಗಳ ಅಧ್ಯಯನ ಮಾಡಿದರು. ಸ್ನಾತಕೋತ್ತರ ಪದವೀಧರರು. 1970ರಲ್ಲಿ ಪ್ರಯಾಗ ವಿಶ್ವವಿದ್ಯಾನಿಲಯದ (ಉತ್ತರ ಪ್ರದೇಶ)ದಿಂದ ಸಾಹಿತ್ಯರತ್ನವನ್ನೂ ಪಡೆದರು. 1983ರಲ್ಲಿ ಮೈಸೂರು ರೀಜನಲ್ ಕಾಲೇಜ್ ಆಫ್ ಎಜುಕೇಷನ್ ಸಂಸ್ಥೆಯಿಂದ ಬಿ.ಎಡ್., ಪದವೀಧರರು. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು.  ಆರೂಢ ಸಂಪ್ರದಾಯದ ಸದ್ಗುರು ಬಾಬಾ ಪ್ರಶಸ್ತಿ, ಶಿವಕಮಲ ಸಾಹಿತ್ಯ ಪ್ರಶಸ್ತಿ, ...

READ MORE

Related Books