ಸಂಸ್ಕೃತ ಸಾಹಿತ್ಯ, ಕಾವ್ಯ, ಚಂಪೂಕಾವ್ಯ, ನಾಟಕಗಳು, ಛಂದಸ್ಸು, ವ್ಯಾಕರಣ ಮೊದಲಾದ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದ ಷಣ್ಮುಗಯ್ಯ ಅಕ್ಕೂರಮಠ ಅವರ ಲೇಖನಗಳ ಸಂಗ್ರಹ ಇದಾಗಿದೆ. “'ಪರಮಾನುಭವ ಬೋಧೆ'ಯ ತತ್ವದರ್ಶನ ಹಾಗೂ ಬೋಧನಾ ವೈಖರಿ, 'ಪರಮಾನುಭವ ಬೋಧೆ'ಯಲ್ಲಿ ಯಾಜ್ಞವಲ್ಕರ ಶೃಂಗಾರಮಯ ಸಂಬೋಧನೆಗಳು, ಕೈವಲ್ಯಪದ್ಧತಿಯಲ್ಲಿ ನಾಮಾವಳಿಗಳ ವೈಭವ ಹಾಗೂ ತಾತ್ವಿಕ ಮೌಲ್ಯ, ಕೈವಲ್ಯಸಾಹಿತ್ಯದಲ್ಲಿ ನಿಜಗುಣರ ನಿಲುವು, ಕೈವಲ್ಯ ದರ್ಪಣ: ಒಂದು ಅವಲೋಕನ, ಪ್ರಸ್ತಾವನೆ : `ಶರೀರವೆಂಬ ಹೋಲಿ, ಅನುಭಾವಿ ಕವಿಯಾಗಿ ಮುಪ್ಪಿನ ಷಡಕ್ಷರಿ, ಮರುಳಸಿದ್ಧನ ಕಂತೆಯಲ್ಲಿ ಜೀವನ ಸೌಂದರ್ಯ, ಶಿಶುವಿನಾಳ ಶರೀಫರ ಅನುಭಾವ ಸಾಹಿತ್ಯ, ಲಲ್ಲೇಶ್ವರಿ, ಅರೇಬಿಯಾದ ವಿರಾಗಿಣಿ: ರಾಬಿಯಾ ಜೀವನ ಮತ್ತು ಸಂದೇಶ, ಮತಿಗೆ ಮಂಗಳವಾವುದು? – ಉತ್ತಮಸಂಗ, ಸತ್ತು ಬದುಕಬೇಕು, ಹಣ, ಸುಖ, ಮನೋಭಾವ, ಮೋಹ” ಮುಂತಾದ ಬರಹಗಳು ಇಲ್ಲಿವೆ.
©2024 Book Brahma Private Limited.