‘ಮಹಾಕಾವ್ಯ’ ಎಂಬ ಮೊದಲನೆಯ ಸಂಪುಟವು ಮುಳ್ಳೂರು ನಾಗರಾಜರ ‘ನೆಲದ ಜೋಗುಳ’ ಮತ್ತು ‘ಏಕಾಂಗಿ ಏಕಲವ್ಯ’ ಮಹಾಕಾವ್ಯವನ್ನು ಒಳಗೊಂಡಿದೆ. ರಾಮಾಯಣದ ಶಂಬೂಕ, ಮಹಾಭಾರತದ ಏಕಲವ್ಯರನ್ನು ಕೇಂದ್ರವಾಗಿಟ್ಟುಕೊಂಡು ರಚಿಸಿದ್ದಾರೆ ಮುಳ್ಳೂರು ನಾಗರಾಜ. ಇಲ್ಲಿರುವ ಮಹಾಕಾವ್ಯಗಳು ದಮನಿತ ಸಮುದಾಯಗಳ ಶೋಷಣೆಯ ಬದುಕಿನ ಹಲವು ಆಯಾಮಗಳನ್ನು ತೆರೆದಿಡುತ್ತಾ ಶಂಬೂಕ ಮತ್ತು ಏಕಲವ್ಯ ಚಿತ್ರಣಗಳನ್ನು ಹೊಸ ದೃಷ್ಟಿಕೋನದ ಮೂಲಕ ಕಂಡಿದ್ದಾರೆ. ಮುಳ್ಳೂರು ನಾಗರಾಜ ಅವರ ಕೃತಿಗಳನ್ನು ಅಪ್ಪಗೆರೆ ಸೋಮಶೇಖರ್ ಅವರು ಸಂಪಾದಿಸಿದ್ದು ಕನ್ನಡ ಪುಸ್ತಕ ಪ್ರಾಧಿಕಾರ ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಿದೆ.
©2024 Book Brahma Private Limited.