ನಾಡಿ ಮಿಡಿತ ಸಂಪುಟ-3

Author : ನಾ. ಡಿಸೋಜ

Pages 670

₹ 675.00




Year of Publication: 2020
Published by: ಸುವಿ ಪಬ್ಲಿಕೇಷನ್ಸ್
Address: ಗಮ-577214,ಶಿಕಾರಿಪುರ, ಶಿವಮೊಗ್ಗ ಜಿಲ್ಲೆ, ಕರ್ನಾಟಕ
Phone: 9620083614

Synopsys

‘ನಾಡಿ ಮಿಡಿತ’ ಸಮಗ್ರ ಕಾದಂಬರಿಗಳ ಸಂಪುಟವಾಗಿದ್ದು, ಈ ಕೃತಿಯು ನಾ. ಡಿಸೋಜ ಅವರ ಸಂಪುಟ-3 ಭಾಗವಾಗಿದೆ. ಇಲ್ಲಿ ಕಾಡಿನ ಬೆಂಕಿ, ರಾಗ ವಿರಾಗ, ಸೇತುವೆ, ಪ್ರೀತಿ ಎಂಚ ಚುಂಬಕ, ಕುಂಜಾಲು ಕಣಿವೆಯ ಕೆಂಪು ಹೂವು, ಒಂದು ಜಲಪಾತದ ಸುತ್ತ ಸೇರಿದಂತೆ ಆರು ಕಾದಂಬರಿಗಳನ್ನು ಕಾಣಬಹುದು. ‘ಕಾಡಿನ ಬೆಂಕಿ’ ಚಲನಚಿತ್ರವಾಗಿ ಪ್ರಶಸ್ತಿಗಳನ್ನ ಗಳಿಸುವುದರ ಜೊತೆಗೆ ಓದುಗರು ಕೂಡ ಇದನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಈ ಕಾದಂಬರಿಯ ವಿಶೇಷ ಕಾದಂಬರಿಯೆಂದರೆ ‘ಕುಂಜಾಲು’. ಉರುಳಿ ಹೋಗುವ ಕಾಲ ಏನೆಲ್ಲವನ್ನ ಬದಲಾಯಿಸಿ ಬಿಡುತ್ತದೆ ಎಂಬುದನ್ನ ಓದುಗರಿಗೆ ತಿಳಿಸಿ ಕೊಡುವ ಕೃತಿ. ಇದು ‘ಕೆಂಜಿಯ ಕುಸುಮಂ’ ಎಂಬ ಹೆಸರಿನಲ್ಲಿ ತೆಲುಗು ಭಾಷೆಗೆ ಅನುವಾದಗೊಂಡಿತು. ಕೆಲವರು ಇದನ್ನ ನಾಟಕ ರೂಪದಲ್ಲಿಯೂ ಹೊರತಂದರು. ‘ ಒಂದು ಜಲಪಾತದ ಸುತ್ತ’ ಕಾದಂಬರಿಯಲ್ಲಿ ಜೋಗ ಜಲಪಾತದ ಕೆಲ ಜಲಪಾತಗಳು ಪಾತ್ರಗಳಾಗಿ ಈ ಕಾದಂಬರಿಯಲ್ಲಿ ಬಂದಿರುವುದೊಂದು ವಿಶೇಷ. ಇನ್ನು ‘ರಾಗ-ವಿರಾಗ’ ಕಾದಂಬರಿಯು ಓರ್ವ ವಿದೇಶಿ ಪ್ರವಾಸಿ ತನ್ನ ಪ್ರವಾಸ ಕಥನದಲ್ಲಿ ಕತೆ ಹೇಳುವುದನ್ನು ತಿಳಿಸುತ್ತದೆ.

About the Author

ನಾ. ಡಿಸೋಜ

ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ.  ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಪ್ರಾರಂಭದ ದಿನಗಳಲ್ಲಿ 'ಪ್ರಪಂಚ' ಪತ್ರಿಕೆಗೆ ಕಥೆಗಳನ್ನು ಬರೆಯುತ್ತಿದ್ದರು. ಡಿಸೋಜರ ಮೊದಲ ಕಾದಂಬರಿ ‘ಬಂಜೆ ...

READ MORE

Related Books