ರಾಷ್ಟ್ರಧರ್ಮದ್ರಷ್ಟಾರ ಹಡೇ೯ಕರ ಮಂಜಪ್ಪ, ಸಂಪುಟ-೨:

Author : ಎಂ.ಎಂ. ಕಲಬುರ್ಗಿ

Pages 1150




Published by: ಲಿಂಗಾಯತ ಅಧ್ಯಯನ ಸಂಸ್ಥೆ
Address: ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ

Synopsys

ಕರ್ನಾಟಕದ ಗಾಂಧಿ ಎಂದೇ ಪ್ರಸಿದ್ಧರಾಗಿದ್ದ ಹರ್ಡೇಕರ್‌ ಮಂಜಪ್ಪನವರ ಜನ್ಮಶತಮಾನೋತ್ಸವದ ಅಂಗವಾಗಿ ಅವರ ಗೌರವಾರ್ಥ ಕರ್ನಾಟಕ ಸರ್ಕಾರ ಗ್ರಂಥ ಪ್ರಕಟಿಸಲು ನಿರ್ಧರಿಸಿತು. ಅದರ ಹೊಣೆ ಹೊತ್ತದ್ದು ಎಂ.ಎಂ. ಕಲಬುರ್ಗಿ. ಮಂಜಪ್ಪನವರನ್ನು ಕುರಿತು ಡಾ. ಸಿ.ಚೆ.ನಂದಿಮಠ, ಕುವೆಂಪು, ಡಾ.ಗ.ಸ.ಹಾಲಪ್ಪ, ಶಿವಾನಂದ ಗುಬ್ಬಣ್ಣವರ ಮುಂತಾದವರು ಪ್ರಕಟಿಸಿದ್ದ ಕೃತಿಗಳನ್ನು ಆಧರಿಸಿ ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪ ಎನ್ನುವ ಸಂಪುಟವನ್ನು ಈ ಮೊದಲು ಕಲಬುರ್ಗಿ ಸಂಪಾದಿಸಿಕೊಟ್ಟಿದ್ದರು. ಆದರೆ ಮಂಜಪ್ಪನವರ ಕೃತಿ ಸಂಖ್ಯೆಗಳ ನಿರ್ಣಯ, ಕೃತಿನಾಮ ವ್ಯತ್ಯಾಸ, ಬೇರೊಬ್ಬರ ಕೃತಿಗಳನ್ನು ಮಂಜಪ್ಪನವರದೆಂದು ಕೆಲವರು ಭಾವಿಸಿ ಪ್ರಕಟಿಸಿರುವುದನ್ನೆಲ್ಲಾ ಗಮನಿಸಿ ಇನ್ನೊಂದು ಆವೃತ್ತಿಯನ್ನು ಹೊರತರಲು ನಿರ್ಧರಿಸಿದರು ಅದರ ಫಲವೇ ರಾಷ್ಟ್ರಧರ್ಮದ್ರಷ್ಟಾರ ಹಡೇ೯ಕರ ಮಂಜಪ್ಪ, ಸಂಪುಟ-೨.

ಆತ್ಮಚರಿತ್ರೆ, ರಾಷ್ತ್ರೀಯ ಸಾಹಿತ್ಯ, ಸಾಮಾಜಿಕ ಸಾಹಿತ್ಯ, ಮಕ್ಕಳ ಸಾಹಿತ್ಯ, ಸೃಜನ ಎಂಬ ಭಾಗಗಳಾಗಿ ಕೃತಿ ಹರಡಿಕೊಂಡಿದೆ.

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books