ನವ್ಯ ಸಾಹಿತ್ಯ

Author : ರಾಜಶೇಖರ ಬಿರಾದಾರ

₹ 300.00




Year of Publication: 2022
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಸರ್ಸವತಿಯ ಗೋದಾಮು, ಕಲಬುರಗಿ-585101
Phone: 9448124431

Synopsys

ಡಾ. ಕಲ್ಯಾಣರಾವ ಜಿ. ಪಾಟೀಲ ಅವರ ಪ್ರಧಾನ ಸಂಪಾದಕತ್ವದಲ್ಲಿ *ಕನ್ನಡ ಸಾಹಿತ್ಯ ಪುನರಾವಲೋಕನ ಮಾಲೆ* ಎಂಬ ವಿನೂತನ ಶೈಕ್ಷಣಿಕ ಶಿಸ್ತಿನ, ಸಾಹಿತ್ಯಿಕ ಯೋಜನೆಯ ಹತ್ತು ಸಂಪುಟಗಳು ಹೊರಬರುತ್ತಿರುವುದು ನಾಡಿನ ಸಾರಸ್ವತ ಲೋಕವೇ ಹೆಮ್ಮೆಪಡುವ ಸಂಗತಿಯಾಗಿದೆ. ಈ ಮಾಲೆಯ ಏಳನೆಯ ಸಂಪುಟ 'ನವ್ಯ ಸಾಹಿತ್ಯ'ವನ್ನು ವಿದ್ಯಾರ್ಥಿ ಮಿತ್ರ ಡಾ. ರಾಜಶೇಖರ ಬಿರಾದಾರ ಅವರು ಸಂಪಾದಿಸಿದ್ದಾರೆ. ಸಹೃದಯ ಓದುಗರ ಪ್ರಜ್ಞೆ ವೈಯಕ್ತಿಕ ಸಂವೇದನೆಗೆ ಹೆಚ್ಚಿನ ಮಹತ್ವವನ್ನು ನೀಡಿದ ಈ ಸಾಹಿತ್ಯ ಪಂಥವು ಪ್ರತಿಯೊಬ್ಬರ ಆಸೆ, ಅಭಿಲಾಷೆ, ಸಾಧನೆ ಮತ್ತು ಸಾಮರ್ಥ್ಯಗಳಿಗೆ ಕ್ಷಕಿರಣ ಬೀರಿ, ಒಡಮೂಡಿಸಿದ ಪ್ರಜ್ಞೆ ಅತ್ಯಂತ ಗಮನಾರ್ಹವಾದುದು. ಈ ಕೃತಿಯಲ್ಲಿ ಸಮಾವೇಶಗೊಂಡಿರುವ ಲೇಖನಗಳು ನವ್ಯ ಸಾಹಿತ್ಯದ ಸ್ವರೂಪ, ಆಶಯ, ಧ್ವನಿ, ಉದ್ದೇಶ ಮತ್ತು ಸಂವೇದನೆಯಂತಹ ಅಂಶಗಳನ್ನು ಗಂಭೀರವಾಗಿ ಪ್ರಚುರಪಡಿಸಿರುವುದಾಗಿವೆ. ನವ್ಯ ಸಾಹಿತ್ಯದ ಮರುಓದನ್ನು ಹೇಗೆ ಮಾಡಬೇಕು ಎಂಬುದನ್ನು ಹೊಸ ತಲೆಮಾರಿನ ಓದುಗರಿಗೆ ಮನನಗೊಳಿಸುವುದಾಗಿದೆ. ಡಾ. ವಿಠಲರಾವ್ ಟಿ. ಗಾಯಕ್ವಾಡ್, ಪ್ರಾಧ್ಯಾಪಕರು, ಕನ್ನಡ ವಿಶ್ವವಿದ್ಯಾಲಯ ಹಂಪಿ (ಬೆನ್ನುಡಿಯಿಂದ)

About the Author

ರಾಜಶೇಖರ ಬಿರಾದಾರ

ಲೇಖಕ ರಾಜಶೇಖರ ಬಿರದಾರ ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೋನ್ಹಾಳ ಗ್ರಾಮದವರು. ತಂದೆ ಹಣಮಂತ್ರಾಯಗೌಡ ಬಿರಾದಾರ. ತಾಯಿ ಗಂಗಮ್ಮ ಹ. ಬಿರಾದಾರ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಪೇಠ ಅಮ್ಮಾಪುರದಲ್ಲಿ ಪ್ರೌಢಶಿಕ್ಷಣ, ಸುರಪುರದ ಪ್ರಭು ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪದವಿ ಹಾಗೂ ಬೆಂಗಳೂರಿನ ಜಾಲಹಳ್ಳಿಯಲ್ಲಿ ಬಿ.ಇಡಿ ನಂತರ ಕರ್ನಾಟಕ ವಿ.ವಿ. ಯಿಂದ ಎಂ.ಎ. ಪದವಿ, ತದನಂತರ, ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪಡೆದಿದ್ದಾರೆ. ಪ್ರಸ್ತುತ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ  ಯರಗಟ್ಟಿಯ ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.  ಕೃತಿಗಳು : ವಚನ ಸಾಹಿತ್ಯ ಮತ್ತು ...

READ MORE

Related Books