ನೆಲಸಂಪಿಗೆ (ಸಮಗ್ರ ಸಂಪುಟ-2)

Author : ಚಂದ್ರಶೇಖರ ಕಂಬಾರ

Pages 702

₹ 525.00




Year of Publication: 2017
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ಮೂಲತಃ ನಾಟಕಕಾರರು. ಬೆಂಬತ್ತಿದ ಕಣ್ಣು, ನಾರ್ಸಿಸ್ಸ್, ಋಷ್ಯಶೃಂಗ, ಜೋಕುಮಾರಸ್ವಾಮಿ, ಚಾಳೇಶ , ಸಂಗ್ಯಾಬಾಳ್ಯಾ, ಕಿಟ್ಟಿಯ ಕಥೆ, ಜೈಸಿದ್ದನಾಯಕ, ಆಲಿಬಾಬ, ಕಾಡುಕುದುರೆ, ನಾಯಿಕಥೆ, ಖಾರೋಖಾರ, ಮತಾಂತರ, ಹರಕೆಯ ಕುರಿ, ಸಾಂಬಶಿವ ಪ್ರಹಸನ, ಹುಲಿಯ ನೆರಳು, ಬೋಳೆ ಶಂಕರ, ಪುಷ್ಪರಾಣಿ, ತಿರುಕನ ಕನಸು, ಮಹಾಮಾಯಿ, ನೆಲಸಂಪಿಗೆ, ಜಕ್ಕಣ, ಶಿವರಾತ್ರಿ ಹೀಗೆ ಒಟ್ಟು 25 ನಾಟಕಗಳನ್ನು ರಚಿಸಿದ್ದು, ಆ ಪೈಕಿ ಕೆಲವನ್ನು ನೆಲಸಂಪಿಗೆ ಸಮಗ್ರ ಸಂಪುಟ-1ರಲ್ಲಿ ಸೇರ್ಪಡೆಗೊಳಿಸಿದೆ. ಉಳಿದವನ್ನು ನೆಲಸಂಪಿಗೆ ಸಮಗ್ರ ಸಂಪುಟ-2ರಲ್ಲಿ ಸೇರ್ಪಡೆಗೊಳಿಸಲಾಗಿದೆ.

About the Author

ಚಂದ್ರಶೇಖರ ಕಂಬಾರ
(02 January 1937)

ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ   ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ.  ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು.  ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.  ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು  ಪಿ.ಎಚ್.ಡಿ ಪದವಿಗಳನ್ನು ಪಡೆದರು.  ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು.  ಹಂಪಿಯ ...

READ MORE

Related Books