ತೊಂಡುಮೇವು-3

Author : ಕೆ.ವಿ. ನಾರಾಯಣ

Pages 324

₹ 300.00




Year of Publication: 2017
Published by: ಪ್ರಗತಿ ಗ್ರಾಫಿಕ್ಸ್‌
Address: 119, 3ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಹಂಪಿನಗರ, ಆರ್.ಪಿ.ಸಿ. ಲೇಔಟ್, ವಿಜಯನಗರ 2ನೇ ಹಂತ ಬೆಂಗಳೂರು-560104
Phone: 080-23409512

Synopsys

ಹಿರಿಯ ಲೇಖಕ ಕೆ.ವಿ. ನಾರಾಯಣ ಅವರ ಸಮಗ್ರ ಬರೆಹಗಳ ಸರಣಿಯ ಮೂರನೇ ಸಂಪುಟ. ಈ ಸಂಪುಟದಲ್ಲಿ ಸಾಹಿತ್ಯ- ವಿಮರ್ಶೆ ಕುರಿತ ಬರಹಗಳು ಮತ್ತು ನಾರಾಯಣ ಅವರ ಕೆಲವು ಲೇಖಕರಿಗೆ ಬರೆದ ಮುನ್ನುಡಿಗಳಿವೆ. ಒಟ್ಟು 87 ಬರೆಹಗಳಿರುವ ಈ ಗ್ರಂಥವನ್ನು ಹೊಸಗನ್ನಡ ಸಾಹಿತ್ಯದಲ್ಲಿ ಆಸಕ್ತರಾಗಿರುವವರು ಗಮನಿಸಲೇಬೇಕು. ಹೊಸಗನ್ನಡ ಸಾಹಿತ್ಯ ಸಂಶೋಧನೆಯ ಪೂರ್ವ ಚರಿತ್ರೆ ಮುನ್ನೋಟಗಳು’ ಸಂಪುಟದ ಮೊದಲ ಬರೆಹ. ಶಂಗಂ ತಮಿಳಿಗಂ. ಸೃಜನ ಸಾಹಿತ್ಯ ಪ್ರಗತಿ (1956-1981), ವಿಮರ್ಶೆಯಲ್ಲಿ ವಿಸಂಗತಿಯ ಸಾಧ್ಯತೆ, ಸಾಹಿತ್ಯ ಮತ್ತು ನಿಸರ್ಗಗಳ ಸಂಬಂಧದ ಪಲ್ಲಟಗಳು ಲೇಖನಗಳು ಆರಂಭದಲ್ಲಿ ಭೂಮಿಕೆಯನ್ನು ಒದಗಿಸುತ್ತವೆ. ಪು.ತಿ.ನ. ಅವರ ಶ್ರೀಹರಿಚರಿತೆ, ಗಂಗಾಧರ ಚಿತ್ತಾಲರ ಕಾವ್ಯ, ಬೇಂದ್ರೆಯವರ ತುತ್ತಿನ ಚೀಲ- ಒಂದು ವಿಮರ್ಶಾ ಕಮ್ಮಟ, ಕೆ.ಎಸ್.ನ. ಅವರ ಕಾವ್ಯ ಭಾಷೆ ಕುರಿತ ಲೇಖನಗಳಿವೆ. ಅಲ್ಲದೇ ಅಡಿಗ, ಕಾರಂತ, ಕಂಬಾರ, ಎಕ್ಕುಂಡಿ, ಜಿಎಸ್ಸೆಸ್, ಪುಟ್ಟಣ್ಣ, ಶಾಂತಿನಾಥ ದೇಸಾಯಿ, ಮಾಸ್ತಿ, ಲಂಕೇಶ, ತೇಜಸ್ವಿ, ಆಲನಹಳ್ಳಿ, ಯಶವಂತ ಚಿತ್ತಾಲ, ವಿ.ಸೀ. ಶ್ರೀನಿವಾಸರಾಜು ಅವರ ಕೃತಿಗಳ ಕುರಿತ ವಿಮರ್ಶಾ ಬರೆಹಗಳಿವೆ.

ಬೆಸಗರಹಳ್ಳಿ ರಾಮಣ್ಣ, ಚಿ. ಶ್ರೀನಿವಾಸರಾಜು, ಕೆ.ವೈ. ನಾರಾಯಣಸ್ವಾಮಿ, ದು. ಸರಸ್ವತಿ, ರಾಘವೇಂದ್ರ ಪಾಟೀಲ, ಅರುಣ್ ಜೋಳದ ಕೂಡ್ಲಿಗಿ, ಬೆಳ್ಳೂರು ವೆಂಕಟಪ್ಪ, ಶಶಿಕಲಾ ಮುಂತಾದವರ ಕೃತಿಗಳಿಗೆ ಬರೆದ ಮುನ್ನುಡಿಗಳನ್ನೂ ಈ ಸಂಪುಟದಲ್ಲಿ ಸೇರಿಸಲಾಗಿದೆ.

About the Author

ಕೆ.ವಿ. ನಾರಾಯಣ
(20 October 1948)

ಕಂಪಲಾಪುರ ವೀರಣ್ಣ ನಾರಾಯಣ ಅವರು ಜನಿಸಿದ್ದು 1948ರಲ್ಲಿ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು ಕಂಪಲಾಪುರ. ಅಮ್ಮ ಕೆಂಚಮ್ಮ ಮತ್ತು ಅಪ್ಪ ವೀರಣ್ಣ. ಮೊದಲ ಹಂತದ ಓದು ಪುತ್ತೂರು ಮತ್ತು ತಾಲ್ಲೂಕು ಕೇಂದ್ರ ಪಿರಿಯಾಪಟ್ಟಣದಲ್ಲಿ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನವನ್ನು ತೆಗೆದುಕೊಂಡು ಪಿ.ಯು.ಸಿ. ಓದಿದರು. ಇಂಜಿನಿಯರಿಂಗ್ ಮಾಡಲು ಅವಕಾಶವಿದ್ದರೂ ಎಂಜಿನಿಯರ್ ಆಗಕೂಡದೆಂದು ತೀರ್ಮಾನಿಸಿದ ಕೆ.ಎ.ಎಸ್ ಮತ್ತೆ ಮೈಸೂರಿನ ಯುವರಾಜ ಕಾಲೇಜಿನಲ್ಲಿ ವಿಜ್ಞಾನದ ಅಭ್ಯಾಸವನ್ನು ಮುಗಿಸಿದರು. ಆನಂತರದಲ್ಲಿ ಬಿ.ಎಡ್. ಮುಗಿಸಿ ಆರಂಭಿಸಿದ್ದು ಹೈಸ್ಕೂಲಿನಲ್ಲಿ ಅಧ್ಯಾಪನ. ಮುಂದಿನ ಓದಿಗಾಗಿ ಮತ್ತೆ ಬೆಂಗಳೂರಿನತ್ತ ಪಯಣ. ಆ ಹೊತ್ತಿಗೇನೆ ಸಾಹಿತ್ಯದ ಓದಿಗೂ ಬಿದ್ದು ಬರವಣಿಗೆಯಲ್ಲೂ ...

READ MORE

Related Books