ಭಾರತದ ಹೆಸರಾಂತ ಬರಹಗಾರ್ತಿ ಬಂಗಾಳದ ಮಹಾಶ್ವೇತಾದೇವಿ ಅವರ ಬರಹಗಳು ಕನ್ನಡಕ್ಕೂ ಅನುವಾದಗೊಂಡಿವೆ. ಮೌಖಿಕ ಇತಿಹಾಸ, ಜನಕಥೆ, ಜಾನಪದ ಜ್ಞಾನದಲ್ಲಿ ಅಪಾರ ನಂಬಿಕೆ ಹೊಂದಿದ್ದ ಮಹಾಶ್ವೇತಾದೇವಿ ಇವೆಲ್ಲವನ್ನೂ ತಮ್ಮ ಬರಹದಲ್ಲಿ ರೂಢಿಸಿಕೊಂಡಿದ್ದರು. ಇವರು ಬರೆದ ಕಥಾ ಸಂಕಲನ ಕಾದಂಬರಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಈ ಕೃತಿಯಲ್ಲಿ ಮಹಾಶ್ವೇತಾದೇವಿ ಅವರ ಕಥಾ ಸಂಕಲನಗಳ ಸಮಗ್ರ ಮಾಹಿತಿ ದೊರೆಯುತ್ತದೆ. ಎಚ್.ಎಸ್. ಶ್ರೀಮತಿ ಅವರು ಅನುವಾದಿಸಿರುವ ಈ ಪುಸ್ತಕದಲ್ಲಿ ಮಹಾಶ್ವೇತಾದೇವಿ ಅವರು ಬರೆದ ಕಥೆಗಳ ಆಯ್ದ ಅಧ್ಯಾಯಗಳನ್ನು ಕನ್ನಡದ ಓದುಗರಿಗೆ ನೀಡಿದ್ದಾರೆ.
©2024 Book Brahma Private Limited.