ಜಡ್ಡುಗಟ್ಟಿದಂತಿದ್ದ ಕನ್ನಡ ಕಾವ್ಯಕ್ಕೆ ಸಿದ್ಧಲಿಂಗಯ್ಯನವರ ಶತಮಾನಗಳ ನೋವು, ಅವಮಾನ, ಹಸಿವುಗಳ ಒಳಸಂಕಟ ಪ್ರತಿಕ್ರಿಯಾತ್ಮಕವಾಗಿ ದನಿಯೆತ್ತುವ ಬಗೆಯ ರಚನೆಗಳು ಹೊಸ ಚುರುಕನ್ನು, ಭಾಷಾ ಪ್ರಯೋಗದ ಹೊಸತನವನ್ನು ಪರಿಚಯಿಸಿದೆ. ಅವರ ನಾಟಕಗಳು ಕನ್ನಡ ರಂಗಭೂಮಿಯಲ್ಲಿ ಹಲವು ಬಾರಿ ಪ್ರದರ್ಶನ ಕಂಡಂತೆ ಜನಪ್ರಿಯತೆ ಪಡೆದಿದ್ದು. ಸಿದ್ಧಲಿಂಗಯ್ಯನವರು ಭಾರತೀಯ ಸಮಾಜೋ ಧಾರ್ಮಿಕ ಹಾಗು ಸಮಾಜೋ ರಾಜಕೀಯ ಸಂಘರ್ಷ ಸೂಕ್ಷ್ಮಗಳನ್ನು ತಮ್ಮ ನಾಟಕಗಳಲ್ಲಿ ಸೂಕ್ಷ್ಮವಾಗಿ ವಿವರಿಸಿದ್ದಾರೆ. ದಲಿತ ಸಂವೇದನೆಯ ಒಳನೋಟಗಳನ್ನು ತುಂಬಿಕೊಂಡಂತೆ ಪುರಾಣ, ಇತಿಹಾಸ ಮತ್ತು ವರ್ತಮಾನವನ್ನು ಮುಖಾಮುಖಿಯಾಗಿಸಿದ ಸಮರ್ಥ ನಾಟಕಗಳನ್ನು ಈ ಕೃತಿಯು ಒಳಗೊಂಡಿದೆ.
©2024 Book Brahma Private Limited.