’ಕನ್ನಡದ ಪುಲ್ಲೆನಗೆ ಪಾವನ ತುಳಸಿ’ ಎಂದು ಹಾಡಿದ ಕವಿ ಸಾಲಿ ರಾಮಚಂದ್ರರಾಯರು. ಕನ್ನಡ ನವೋದಯ ಕವಿಗಳಲ್ಲಿ ಒಬ್ಬರಾಗಿ ’ಸಾರಾ’ ಅವರು ಧಾರವಾಡದಲ್ಲಿ ಶಿಕ್ಷಕರಾಗಿದ್ದರು. ಅವರ ಮಗ ರಾಮ ತೀರಿಕೊಂಡಾಗ ರಚಿಸಿದ ’ತಿಲಾಂಜಲಿ’ ಕನ್ನಡದ ಮೊದಲ ವಿಲಾಪಗೀತೆ. ರಾಮಚಂದ್ರರಾಯರು ರಚಿಸಿದ ರಾಮಾಯಣ ಕಾವ್ಯದ ಸರಣಿ ಕೃತಿಗಳು ಪೂರ್ಣವಾಗಿ ಪ್ರಕಟವಾಗದೇ ಇರುವುದು ಬಹುದೊಡ್ಡ ನಷ್ಟ.
ಹಿರಿಯ ಕವಿ- ಅನುವಾದಕ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ರಾಮಚಂದ್ರರಾಯರ ಎಲ್ಲ ಕವಿತೆಗಳನ್ನು ಈ ಸಂಕಲನದಲ್ಲಿ ಸಂಗ್ರಹಿಸಿ ನೀಡಿದ್ದರು. ರಾಮಚಂದ್ರರಾಯರ ಸಮಗ್ರ ಕವಿತೆಗಳ ಸಂಗ್ರಹ ಇದಾಗಿದೆ.
©2024 Book Brahma Private Limited.