‘ಎಲ್ಲ ಕತೆ, ಕಾದಂಬರಿಗಳು’ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರ ಎಲ್ಲ ಕತೆ, ಕಾದಂಬರಿಗಳ ಸಂಕಲನ. ಈ ಕೃತಿಯಲ್ಲಿ ಪತ್ರಕರ್ತ ಪಿ. ಲಂಕೇಶ್ ಅವರ ಬೆನ್ನುಡಿ ಇದೆ. ಮಹಾದೇವ ಅವರ ಬಗ್ಗೆ ಬರೆಯುತ್ತಾ ‘ನಾನು ಕಳೆದ ಇಪ್ಪತ್ತೈದು ವರ್ಷದಿಂದ ಬಲ್ಲಂತೆ ದೇವನೂರ ಮಹದೇವ ಸೋಮಾರಿತನದ, ಡೋಲಾಯಮಾನದ, ಹಿಂಜರಿಕೆಯ ವ್ಯಕ್ತಿ; ಇದೆಲ್ಲದರ ಆಳದಲ್ಲಿ ಹರಿತವಾದ ಸೂಕ್ಷ್ಮ ಮನಸ್ಸಿನ ನ್ಯಾಯವಂತ ಮನುಷ್ಯ ಕೂಡ’ ಎನ್ನುತ್ತಾರೆ. ತಳಸಮುದಾಯಗಳ ದನಿಯಾಗಿ ಬರೆವ ದೇವನೂರು ಮಹಾದೇವರ ಕೃತಿಗಳ ಸಂಕಲನವಾದ ಈ ಕೃತಿ, ಸಾಹಿತ್ಯಾಸಕ್ತರಿಗೆ ಮಾರ್ಗದರ್ಶಿಯಾಗಿದೆ. ಈ ಮೊದಲು ಕೃತಿಯು 1992ರಲ್ಲಿ ಮುದ್ರಣಗೊಂಡಿತ್ತು.
©2024 Book Brahma Private Limited.